ಮಹಿಳೆಗೆ ಗುಪ್ತಾಂಗ ತೋರಿಸಿದ ಪದ್ಮನಾಭ ಸಪಲ್ಯ ವಿರುದ್ಧ ರಾಜಿನಾಮೆಗೆ ಆಗ್ರಹ..!






ಇಡ್ಕಿದು ಗ್ರಾಮ ಪಂಚಾಯತ್ನ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೋಹಿನಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ನ ನೀರಿನ ಸಂಗ್ರಹಣೆಯಲ್ಲಿ ನಿಗದಿತ ದಿನಾಂಕಗಳಂದು ವಾರ್ಡುಗಳ ಸ್ಥಾವರವಾರು ಮಾಡುವಂತೆ ಮತ್ತು ಎಲ್ಲಾ ಮನೆಗಳ ನೀರಿನ ಶುಲ್ಕ ವಸೂಲಾತಿ ಯೋಜನೆಯನ್ನು ಮಾಡುವಂತೆ ನಳ್ಳಿನೀರು ಸಂಗ್ರಹಗಾರರಿಗೆ ಸೂಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮಳೆನೀರಿನ ಚರಂಡಿಯನ್ನು ಪ್ರಾಶಸ್ತದಲ್ಲಿ ಮಾಡುವಂತೆ ಮತ್ತು ಅವಶ್ಯಕತೆ ಇರುವಲ್ಲಿ ಚರಂಡಿಯನ್ನು ಮತ್ತು ಚರಂಡಿಗಳ ಹೂಳೆತ್ತುವ ಬಗ್ಗೆ ಅಧ್ಯಕ್ಷರು ಸೂಚಿಸಿದರು.
ಸಾರ್ವಜನಿಕರಿಂದ ಬಂದಿರುವ ಅರ್ಜಿಗಳನ್ನು ಓದಿ ಅವುಗಳಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಇವರು ದಾರಿಯ ಬಗ್ಗೆ ಸಂಬಂಧಿಸಿದಂತೆ ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ ತೋರಿಸಿದ್ದು, ಈ ಬಗ್ಗೆ ಸಂಬಂಧಿಸಿದ ಮಹಿಳೆ ಪಂಚಾಯತ್ಗೆ ದೂರು ದಾಖಲಿಸಿದ್ದು ಉಪಾಧ್ಯಕ್ಷ ಪದ್ಮನಾಭ ಇವರ ಮೇಲೆ ತುರ್ತು ಕ್ರಮ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದು ಸಭೆಯ ಗಮನಕ್ಕೆ ತರಲಾಯಿತು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಯ ಇಂತಹ ಅಸಭ್ಯ ವರ್ತನೆ ಗ್ರಾಮ ಪಂಚಾಯರ್ನ ಗೌರವವನ್ನು ಮತ್ತು ಪ್ರಸ್ತುತ ಆಯ್ಕೆಯಾಗಿರುವ ಗ್ರಾಮ ಪಂಚಾಯತ್ನ ಎಲ್ಲಾ ಸದಸ್ಯರ ಗೌರವ ಮತ್ತು ಘನತೆಗೆ ಚ್ಯುತಿ ತರುವಂತದ್ದು ವೈಯುಕ್ತಿಕ ವಾದ-ವಿವಾದ ತಕರಾರುಗಳನ್ನು ಅದನ್ನು ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥಗೊಳಿಸಬೇಕಾಗಿರುವುದು ಮತ್ತು ಸಂಯಮದಿಂದ ಇರಬೇಕಾಗಿರುವುದು ಜನಪ್ರತಿನಿಧಿಯ ಕರ್ತವ್ಯ. ಇಂತಹ ಅಸಭ್ಯ ವರ್ತನೆಯು ಲೈಂಗಿಕ ದೌರ್ಜನ್ಯಕ್ಕೆ ಸಮನಾದದ್ದು ಮತ್ತು ಎಲ್ಲಾ ಸದಸ್ಯರು ಜನಸಾಮಾನ್ಯರು ಕೇಳುವ ಪ್ರಶ್ನೆಗಳಿಗೆ ವಿಶೇಷವಾಗಿ ಮಹಿಳಾ ಸದಸ್ಯರು ಉತ್ತರಿಸಬೇಕಾದ್ದು ಮುಜುಗರ ವಿಷಯ.
ದೌರ್ಜನ್ಯ ಪ್ರಕರಣ ದಾಖಲಿಸಿದ್ದು ಪದ್ಮನಾಭರವರು ಸ್ವಯಂ ಆಗಿ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕಿತ್ತು ಮತ್ತು ಗೌರವಯುತವಾಗಿ ಪ್ರಕರಣ ಇತ್ಯರ್ತವಾದ ಬಳಿಕ ಮುಂದಿನ ಕ್ರಮದ ಬಗ್ಗೆ ಚಿಂತಿಸಬೇಕು. ಮೇಲ್ನೋಟಕ್ಕೆ ಪದ್ಮನಾಭರವರು ಅಪರಾಧವೆಸಗಿರುವುದು ಸ್ಪಷ್ಟವಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವಯುತವಾಗಿ ನಡೆದುಕೊಳ್ಳದೆ ಇರುವ ಬಗ್ಗೆ ಎಲ್ಲಾ ಸದಸ್ಯರು ಖಂಡನಾ ನಿರ್ಣಯವನ್ನು ಆಗ್ರಹಿಸಿದರು ಮತ್ತು ನಿರ್ಣಯ ದಾಖಲಿಸುವಂತೆ ಅಧ್ಯಕ್ಷರು ಸೂಚಿಸಿದರು. ಪಂಚಾಯತ್ ಸದಸ್ಯರು ಉಪಾಧ್ಯಕ್ಷರ ನಾಮಫಲಕ ಮತ್ತು ಕುರ್ಚಿಯನ್ನು ತೆರವುಗೊಳಿಸಿದ್ದಾರೆ. ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.