Friday, May 3, 2024
spot_imgspot_img
spot_imgspot_img

ಪುತ್ತೂರು: ಕಲ್ಲೆಗ ಮಾಡತ್ತಾರು ಪುಣ್ಯಕುಮಾರ್ ದೈವಸ್ಥಾನದ ರಸ್ತೆಗೆ ಗುದ್ದಲಿಪೂಜೆ

- Advertisement -G L Acharya panikkar
- Advertisement -

ಪುತ್ತೂರು: ಕಬಕ ಗ್ರಾಮದ ಕಲ್ಲೆಗ ಮಾಡತ್ತಾರು ಪುಣ್ಯಕುಮಾರ್ ದೈವಸ್ಥಾನದ ರಸ್ತೆಗೆ ಗುದ್ದಲಿಪೂಜೆಯನ್ನು ಪುತ್ತೂರು ಶಾಸಕರಾದ ಅಶೋಕ್ ರೈ ನೆರವೇರಿಸಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮಾಂತರ ಭಾಗದ ಬಹುಬೇಡಿಕೆಯ ಒಟ್ಟು 50 ರಸ್ತೆಗಳಿಗೆ ಏಕಕಾಲದಲ್ಲಿ ಅನುದಾನ ಬಿಡುಗಡೆಯಾಗಿದ್ದು ಎಲ್ಲಾ ಕಾಮಗಾರಿಗಳಿಗೂ ಗುದ್ದಲಿ ಪೂಜೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ಗ್ರಾಮಾಂತರ ಪ್ರದೇಶದ ರಸ್ತೆಗಳು ಕಾಂಕ್ರಿಟೀಕರಣವಾಗದೆ ಬಾಕಿ ಇದೆ. ಅನೇಕ ಕಡೆಗಳಲ್ಲಿ ಕಾಂಕ್ರಟೀಕರಣವೇ ನಡೆದಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ರಸ್ತೆ ಅಭಿವೃದ್ದಿಯ ಬಗ್ಗೆ ಭರವಸೆಯನ್ನು ನೀಡಿದ್ದೆ ಆ ರಸ್ತೆಗಳನ್ನು ಹಂತಹಂತವಾಗಿ ಕಾಂಕ್ರೀಟ್ ಮಾಡಲಾಗುವುದು. ಕಾಮಗಾರಿ ನಡೆಯುವ ವಏಳೆ ಗ್ರಾಮಸ್ಥರೇ ಗುಣಮಟ್ಟವನ್ನು ಖಾತ್ರಪಡಿಸಿಕೊಳ್ಳಬೇಕು, ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ ಮತ್ತು ಯಾವುದೇ ಭೃಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ಪುಣ್ಯಕುಮಾರ ಸಾನಿದ್ಯದ ಪದಾಧಿಕಾರಿಗಳಾದ ನಾರಾಯಣ ಗೌಡ ಮುರ, ಹಿರಿಯ ಕಾಂಗ್ರೆಸ್ ಮುಖಂಡರಾದ ಜಿನ್ನಪ್ಪ ಪೂಜಾರಿ, ಜಾನಕಿ ಬಾಳಕೃಷ್ಣ ಗೌಡ, ಪ್ರಶಾಂತ್ ಮುರ, jp ಸಂತೋಷ ಮುರ, ಕಬಕ ವಲಯ ಅಧ್ಯಕ್ಷರಾದ ದಾಮೋದರ್ ಮುರ, ಮುರ ಬೂತ್ ಅಧ್ಯಕ್ಷರಾದ ಸುಂದರ ಸಪಲ್ಯ, ಬಾಲಕೃಷ್ಣ ಪೂಜಾರಿ ಪಲ್ಲತ್ತರು, ಚಂದ್ರಹಾಸ ಗೌಡ ಕಲ್ಲೇಗ, ಪ್ರಸಾದ್ ಕಲ್ಲೇಗ, ದೇವಕಿ ಕಲ್ಲೇಗ, ಪುತ್ತೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಶೀದ್ ಮುರ, ಕಮಲ ಪಲ್ಲತ್ತರು, ದಿನೇಶ್ ಗೌಡ ಸೇವಿರ್, ಭಾರತಿ ಪಲ್ಲತ್ತರು, ದಿನೇಶ್ ಲಕ್ಷ್ಮೀ ಟ್ರಾನ್ಸ್‌ಪೋರ್ಟ್‌, ರಾಮಣ್ಣ ಪಿಲಿಂಜ, ಗಿರಿಜಾ, ಯಮುನಾ ನಲಿಕೆ ರಾಮಣ್ಣ ಗೌಡ್ರು ಅಂಗಡಿ, ಕೂರಗಪ್ಪ ನಾಯ್ಕ್ ಮುರ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!