- Advertisement -
- Advertisement -
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ವಿರಾಜಮಾನರಾಗುತ್ತಿರುವ ವೇಳೆ ಹರಿಯಾಣದಲ್ಲಿ ಹನುಮನ ಪಾತ್ರಧಾರಿಯೊಬ್ಬ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಅಂಗವಾಗಿ ಹರಿಯಾಣದ ಭಿವಾನದಲ್ಲಿ ಬಸ್ಕಿನಾಥ್ ರಾಮಲೀಲಾ ಸಮಿತಿ ರಾಮಲೀಲಾ ನಾಟಕ ಆಯೋಜಿಸಿತ್ತು. ಈ ನಾಟಕದಲ್ಲಿ ಹನುಮನ ಪಾತ್ರ ನಿರ್ವಹಿಸುತ್ತಿದ್ದ 25 ವರ್ಷದ ಹರೀಶ್ ಕುಮಾರ್ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ನಾಟಕ ನಡೆಯುತ್ತಿದ್ದಾಗ ಹನುಮನ ಪಾತ್ರಧಾರಿ ಹರೀಶ್ ಶ್ರೀರಾಮನ ಪಾದಗಳಿಗೆ ನಮಸ್ಕರಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೆಲ ಕಾಲ ಏಳದೆ ಇರುವುದನ್ನು ಕಂಡ ಜನರು ಪಾತ್ರದಲ್ಲಿ ತಲ್ಲೀನರಾಗಿದ್ದಾರೆಂದು ಚಪ್ಪಾಳೆ ಹೊಡೆದಿದ್ದಾರೆ. ನಂತರ ಅನುಮಾನ ಬಂದು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ.
- Advertisement -