ಇಡೀ ಕರ್ನಾಟಕವನ್ನಲ್ಲದೇ, ದೇಶವನ್ನೇ ಬೆಚ್ಚಿ ಬೀಳಿಸಿರುವ ಹಾಸನದ ಜೆಡಿಎಸ್ ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ(ಹಾಸನ ಪೆನ್ಡ್ರೈವ್ ಪ್ರಕರಣ)ದ ಬಗ್ಗೆ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.
ಅಶ್ಲೀಲ ವಿಡಿಯೋ ಪ್ರಕರಣ ಬಯಲಾಗುತ್ತಿದ್ದಂತೆ ಹೊಸ ಹೊಸ ವಿಷಯಗಳು ಅನಾವರಣಗೊಳ್ಳುತ್ತಿದ್ದು, ಪ್ರಜ್ವಲ್ ರವರು ತಾನು ನೂರಾರು ಮಹಿಳೆಯರೊಂದಿಗೆ ನಡೆಸಿದ್ದ ಲೈಂಗಿಕ ಚಟುವಟಿಕೆ, ದೌರ್ಜನ್ಯಗಳನ್ನು ತಾನೇ ತನ್ನ ಐಫೋನ್ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಅದನ್ನು ಸಂತ್ರಸ್ತ ಮಹಿಳೆಯರೊಂದಿಗೆ ‘ಡಿಲೀಟ್’ ಮಾಡುವ ಭರವಸೆ ನೀಡಿದ್ದಾನೆ. ಆದರೆ, ಅದನ್ನು ಡಿಲೀಟ್ ಮಾಡದೆಯೇ, ಇಟ್ಟುಕೊಳ್ಳುವ ಅಭ್ಯಾಸ ಹೊಂದಿದ್ದ.
ಮಾಹಿತಿಯ ಪ್ರಕಾರ, ಸುಮಾರು 2976 ವಿಡಿಯೋಗಳು ಪೆನ್ಡ್ರೈವ್ನಲ್ಲಿವೆ. ಅಡಿಗೆ ಕೆಲಸ ಮಾಡೋ ಅಜ್ಜಿಯನ್ನು ಬಿಟ್ಟಿಲ್ಲ , ಸುಮಾರು ಐದು ವರ್ಷದಿಂದ ನಡೆಯುತ್ತಿರುವ ಈ ಘಟನೆಯಲ್ಲಿ 2000 ಕ್ಕೂ ಅಧಿಕ ಮಹಿಳೆಯರು ಈ ಪ್ರಕರಣದಲ್ಲಿ ಸಂತ್ರಸ್ತರು ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಬಗ್ಗೆ ಎಸ್ಐಟಿ ತನಿಖಾಧಿಕಾರಿಗಳೇ ಪತ್ತೆ ಹಚ್ಚಬೇಕಾಗಿದೆ.
ಈ ಘಟನೆ ಬಗ್ಗೆ ಪ್ರಕ್ರಿಯಿಸಿರುವ ಹೆಚ್ ಡಿ ಕುಮಾರಸ್ವಾಮಿಯವರು ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಉಪ್ಪು ತಿಂದವನು ನೀರು ಕುಡಿಯಲೇಬೇಕು, ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕು ಎಂದಿದ್ದಾರೆ.