- Advertisement -
- Advertisement -




ಕೌಟುಂಬಿಕ ಕಲಹ ಹಿನ್ನಲೆ ದಂಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅಡ್ಲಿಮನೆ ರಸ್ತೆಯ ಚಿಕ್ಕಟ್ಟೆ ಕೆರೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ರಿಜ್ವಾನ್ (31) ಸಮ್ರಿನ್ ಭಾನು (25) ಎಂದು ಗುರುತಿಸಲಾಗಿದೆ.
ಹಾಸನದ ಹಿಲಾಯಿ ನಗರದ ನಿವಾಸಿಗಳಾದ ಇಬ್ಬರು, ನಿನ್ನೆ ಸಂಜೆ ಜಗಳವಾಡಿದ್ದರು. ಸಮ್ರಿನ್ ಬಾನು ಚಿಕ್ಕಟ್ಟೆ ಕೆರೆಗೆ ಹಾರಿದ್ದಾಳೆ. ನಂತರ ಅದೇ ಕೆರೆಗೆ ಪತಿ ರಿಜ್ವಾನ್ ಹಾರಿದ್ದಾನೆ. ಘಟನೆ ಬೆಳಕಿಗೆ ಬಂದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೆನ್ಷನ್ ಮೊಹಲ್ಲ ಠಾಣೆಯ ಪೊಲೀಸರು ಭೇಟಿ ನೀಡಿ ದಂಪತಿ ಶವ ಹೊರತೆಗೆದಿದ್ದಾರೆ.
- Advertisement -