- Advertisement -
- Advertisement -
ಗಂಡನ ಕಿರುಕುಳ ತಾಳಲಾರದೇ ಮಹಿಳೆಯೊಬ್ಬಳು ಎರಡು ವರ್ಷದ ಮಗುವನ್ನು ಉಸಿರುಗಟ್ಟಿಸಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾವನ್ನಪ್ಪಿದ ಮಗು ಶೃತಿಕಾ ಗಂಭೀರ ಸ್ಥಿತಿಯಲ್ಲಿರುವ ತಾಯಿ ಚಿನ್ನಾ ಎಂದು ಗುರುತಿಸಲಾಗಿದೆ.
ಮೂಲತಃ ಆಂಧ್ರ ಮೂಲದವರಾದ ಲಕ್ಷ್ಮೀ ನಾರಾಯಣ – ಚಿನ್ನಾ ದಂಪತಿ ಮೂರು ತಿಂಗಳ ಹಿಂದಷ್ಟೇ ಸೀಗೆಹಳ್ಳಿಯ ಬಳಿ ಬಂದು ವಾಸವಿದ್ದರು. ಗಂಡ ಲಕ್ಷ್ಮೀ ನಾರಾಯಣ ವಿನಾಕಾರಣ ನೀಡುತ್ತಿದ್ದ ಹಿಂಸೆಯಿಂದ ಚಿನ್ನಾ ಮನನೊಂದಿದ್ದಳು. ಮಾ. 16 ರಂದು ಪತಿ ಯಥಾರೀತಿ ಹೆಂಡತಿಗೆ ಹಿಂಸೆ ನೀಡಿದ್ದ. ಮರುದಿನ ಬೆಳಗ್ಗೆ ಮಾ. 17 ರಂದು ಮಗುವನ್ನು ಉಸಿರುಗಟ್ಟಿಸಿ ಹತ್ಯೆಗೈದ ಚಿನ್ನಾ ತಾನೂ ಸಹ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರೆದಿದೆ. ಪತಿ ಲಕ್ಷ್ಮೀ ನಾರಾಯಣ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -