Friday, April 26, 2024
spot_imgspot_img
spot_imgspot_img

ಮಂಗಳೂರು: ನನಗೆ ಗಂಡಾಗಿ ಇರಲು ಇಷ್ಟಇಲ್ಲದ ಕಾರಣ ಸ್ವತಃ ನಾನೇ ಹೆಣ್ಣಾಗಿ ಇರಲು ಇಷ್ಟಪಟ್ಟು ತೃತೀಯ ಲಿಂಗಿ ಆಗಲು ಹೊರಟಿದ್ದೀನಿ; ಸಾನಿಯಾ ಯಾನೆ ನಿಝಾಮ್

- Advertisement -G L Acharya panikkar
- Advertisement -
vtv vitla

ಮಂಗಳೂರು: ನನಗೆ ಗಂಡಾಗಿ ಇರಲು ಇಷ್ಟಇಲ್ಲದ ಕಾರಣ ಸ್ವತಃ ನಾನೇ ಹೆಣ್ಣಾಗಿ ಇರಲು ಇಷ್ಟಪಟ್ಟು ತೃತೀಯ ಲಿಂಗಿ ಆಗಲು ಹೊರಟಿದ್ದೀನಿ. ನಾನು ಲಿಂಗ ಸರ್ಜರಿ ಮಾಡಿಲ್ಲ. ಸಾರ್ವಜನಿಕರಿಂದ ತುಂಬಾ ತೊಂದರೆ ಆಗ್ತಿದ್ದು ನನ್ನನ್ನು ಬದುಕಲು ಬಿಡಿ ಎಂದು ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಸಾನಿಯಾ ಯಾನೆ ನಿಝಾಮ್ ಹೇಳಿದ್ದಾರೆ.

ಇತ್ತೀಚಿಗೆ ನಿಝಾಮ್ ಎಂಬ ಯುವಕನನ್ನು ಅಪಹರಿಸಿ ಲಿಂಗ ಪರಿವರ್ತಿಸಿ ಹೆಣ್ಣಾಗಿ ಮಾಡಲಾಗಿದೆ ಎಂಬ ವೈರಲ್ ಸುದ್ದಿಗೆ ಅವರು ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ. 28/12/2022 ರಂದು ತೊಕೊಟ್ಟುನಲ್ಲಿ ನಡೆದ ಮಂಗಳಮುಖಿಯರ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ಮಹಮ್ಮದ್ ನಿಜಾಮ್ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಸೀರೆ ಉಟ್ಟಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನು ಕಂಡ ಆತನ ಮನೆಯವರು ಉರ್ವ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಬಳಿಕ ನಿಜಾಮ್ ನನ್ನು ಹಾಗೂ ಅವನ ಮನೆಯವರನ್ನು ಉರ್ವ ಪೊಲೀಸ್ ಠಾಣೆಗೆ ಕರೆದು ಮಾತನಾಡಿಸಿದ್ದು, ಈ ಸಂದರ್ಭದಲ್ಲಿ ನಿಜಾಮ್ ನಾನು ಗಂಡಾಗಿರಲು ಇಷ್ಟ ಪಡುವುದಿಲ್ಲ. ನಾನು ಹೆಣ್ಣಾಗಿ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

ಮಂಗಳಮುಖಿಯರ ಫೋಟೋ ಹಾಗೂ ವಿಡಿಯೋವನ್ನು ಇಲ್ಲಸಲ್ಲದ ಆಪಾದನೆಯನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಷಯದ ಬಗ್ಗೆ ಸಮುದಾಯ ಸಂಘಟನೆಗೆ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಸಂಘಟನೆ ಹಾಗೂ ಯಾವುದೇ ಸದಸ್ಯರಿಗೆ ಸಂಬಂಧ ಇರುವುದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಮುಖಿಯರ ಫೋಟೋ ವಿಡಿಯೋವನ್ನು ವೈರಲ್ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆಯು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಿಜಾಮ್ ಯಾನೆ ಸಾನಿಯಾ ಹೇಳಿದರು.

- Advertisement -

Related news

error: Content is protected !!