ನವದೆಹಲಿ: ದೆಹಲಿಯಲ್ಲೊಬ್ಬ ವ್ಯಕ್ತಿ ನಾನಾ ಅಪರಾಧಗಳಿಗಾಗಿ ಶಿಕ್ಷೆ ಅನುಭವಿಸಿ ಜೈಲಿನಲ್ಲೇ ಇದ್ದ. ಜಾಮೀನು ಸಿಕ್ಕು ಜೈಲಿನಿಂದ ಹೊರಬಂದ. ಜಾಮೀನು ಸಿಕ್ತು ಅಂತ ಖುಷಿಯಾಗಿ ಇರ್ಬೇಕು ತಾನೇ? ಅದೇನನ್ನಿಸಿತೋ ಏನೋ ಹೊರಗಡೆ ಜಗತ್ತಿಗಿಂತ ಜೈಲೇ ವಾಸಿ ಎನಿಸಿ ಈ ವ್ಯಕ್ತಿ ಜೈಲಿಗೆ ಮರಳೋ ಪ್ಲಾನ್ ಮಾಡೋಕೆ ಶುರುಮಾಡಿದ್ದಾನೆ. ಅಂತಿoಥಾ ಪ್ಲಾನ್ ಅಲ್ಲ, ನೇರವಾಗಿ ದೇಶದ ಪ್ರಧಾನಿಯನ್ನೇ ಗುರಿ ಮಾಡಿಕೊಂಡಿದ್ದಾನೆ.
ಸೀದಾ ಪೋಲೀಸರಿಗೇ ಕರೆ ಮಾಡಿ ನಾನು ಪ್ರಧಾನಿ ಮೋದಿಯನ್ನು ಸಾಯಿಸ್ತೀನಿ ಎಂದುಬಿಟ್ಟಿದ್ದಾನೆ. ಎಲಾ ಇವ್ನ! ಎಂದು ಕೊಂಡ ಪೋಲೀಸರು ನಿಮಿಷಗಳಲ್ಲೇ ಆತನನ್ನು ಅರೆಸ್ಟ್ ಮಾಡಿದ್ದಾರೆ. ನಂತರ ವಿವರಗಳ್ನನೆಲ್ಲಾ ಕೆದಕಿದಾಗ ತನಗೆ ಜೈಲಿಗೆ ವಾಪಸ್ ಹೋಗಬೇಕು ಎನಿಸಿದೆ. ಅದಕ್ಕಾಗಿ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಹಾಗಾಗಿ ಈ ದಾರಿ ಬಳಸಿದೆ ಎಂದಿದ್ದಾನೆ.
ಈಗ ಪೋಲೀಸರ ಅತಿಥಿಯಾಗಿದ್ದಾನೆ. ಆದರೆ ಪ್ರಧಾನಿಯ ಹೆಸರು ಪ್ರಕರಣದಲ್ಲಿ ಬಂದಿರೋದ್ರಿoದ ಗುಪ್ತಚರ ದಳದವರೂ ಈತನನ್ನು ಪ್ರಶ್ನಿಸಲಿದ್ದಾರೆ. ಜೈಲಿನಲ್ಲಿ ನೆಮ್ಮದಿಯಾಗಿದ್ದೆ ಎಂದಿರುವ ಈತ ಮರಳಿ ಜೈಲಿಗೆ ಹೋಗೋದಂತೂ ಸದ್ಯ ಪಕ್ಕಾ ಆಗಿದೆ. ೨೨ ವರ್ಷ ವಯಸ್ಸಿನ ಈ ವ್ಯಕ್ತಿಯ ಹೆಸರು ಸಲ್ಮಾನ್, ಈತ ದೆಹಲಿಯ ನಿವಾಸಿ.