Thursday, March 28, 2024
spot_imgspot_img
spot_imgspot_img

ರೋಹಿಣಿ ಸಿಂಧೂರಿ ಸೇರಿದಂತೆ ಆರು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ.

- Advertisement -G L Acharya panikkar
- Advertisement -

ಬೆಂಗಳೂರು: ಆರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಿಸಿದ್ದು, ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಒಂದು ತಿಂಗಳ ಹಿಂದೆಯಷ್ಟೇ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಶರತ್ ಅವರಿಗೆ ಯಾವುದೇ ಹುದ್ದೆ ನೀಡಿಲ್ಲ.

ಉಳಿದಂತೆ ಪಿ.ರಾಜೇಂದ್ರ ಚೋಳನ್​- ಬೃಹತ್​ ಬೆಂಗಳೂರು ವಿಶೇಷ ಆಯುಕ್ತರಾಗಿ (ಆರೋಗ್ಯ ಮತ್ತು ಐಟಿ)
ಹೆಪ್ಸಿಬಾ ರಾಣಿ ಕೊರ್ಲಪಾಟಿ- ಬೆಂಗಳೂರು ಸ್ಮಾರ್ಟ್​ ಸಿಟಿ ಲಿಮಿಟೆಡ್​ಗೆ ನಿರ್ವಹಣಾ ನಿರ್ದೇಶಕರಾಗಿ,
ಜೆ. ಮಂಜುನಾಥ್- ಬೃಹತ್​ ಬೆಂಗಳೂರು ವಿಶೇಷ ಆಯುಕ್ತರಾಗಿ (ಎಸ್ಟೇಟ್​),
ಎಂ.ಆರ್. ರವಿ- ಕರ್ನಾಟಕ ಸಿಲ್ಕ್​ ನಿರ್ವಹಣಾ ಮಂಡಳಿಗೆ ನಿರ್ವಹಣಾ​ ನಿರ್ದೇಶಕರಾಗಿ ಹಾಗೂ ಪಿ. ಶಿವಶಂಕರ್ ಅವರನ್ನು ಪಂಚಾಯತ್​ ರಾಜ್​ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

- Advertisement -

Related news

error: Content is protected !!