- Advertisement -
- Advertisement -


ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರ ಇದರ ವತಿಯಿಂದ ಕೊಡಲಾಗುವ ಪ್ರಶಸ್ತಿಗೆ ಮಿತ್ತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆ ಆಗಿರುತ್ತದೆ.
ಪ್ರಶಸ್ತಿಗೆ ಮಾನದಂಡಗಳು Gender equally, Quality education, Zero hunger, Good health and well being ,Decent work and growth ಹೀಗೆ ಸುಮಾರು 22 ಅಂಶಗಳ ಮೌಲ್ಯಮಾಪನ ಮಾಡುವುದರ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ.
ಅತ್ಯುತ್ತಮ ಶಾಲೆಗಳಲ್ಲಿ ಮಿತ್ತೂರು ಶಾಲೆಯು ಕೂಡ ಆಯ್ಕೆಯಾಗಿರುತ್ತದೆ. ಪ್ರಶಸ್ತಿಯು 10000 ರೂ ನಗದು ಬಹುಮಾನ , ನೆನಪಿನ ಪಾರಿತೋಷಕ ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಮಿತ್ತೂರು ಶಾಲೆಯ ಸಹ ಶಿಕ್ಷಕರಾದ ಸಂಜೀವ ನಾಯ್ಕ ಇವರು ಪಡೆದುಕೊಂಡರು.

- Advertisement -