- Advertisement -
- Advertisement -






ರಾಯಚೂರು: ಅಕ್ರಮ ಸೇಂದಿ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ರಾಯಚೂರು ನಗರದ ಅಶೋಕ ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ರೇಣಮ್ಮ ಮತ್ತು ಈರಮ್ಮ ಎಂದು ಗುರುತಿಸಲಾಗಿದೆ.
ಬಂಧಿತರಿಂದ 284 ಕೆ.ಜಿ ಅಲ್ಪಾಜೋಲಮ್, 510 ಗ್ರಾಂ ಸಿ.ಹೆಚ್ ಪೌಡರ್, 96 ಗ್ರಾಮ್ ವೈಟ್ ಪೇಸ್ಟ್ ಮತ್ತು 454 ಗ್ರಾಂ ಸಿಟ್ರಕ್ ಆಸಿಡನ್ನು ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಅಬಕಾರಿ ಉಪ ಆಯುಕ್ತರು, ಉಪ ವಿಭಾಗ ಮತ್ತು ರಾಯಚೂರು ಡಿ.ಸಿ ಕಛೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
- Advertisement -