- Advertisement -
- Advertisement -
ಮಾಣಿ: ಇಂಚರ ರೈತ ಉತ್ಪಾದಕರ ಕಂಪನಿ ನಿಯಮಿತ ಇದರ 2022-23ನೇ ಸಾಲಿನ ಪ್ರಥಮ ವಾರ್ಷಿಕ ಮಹಾಸಭೆಯು ಮಾಣಿ ಕುಲಾಲ ಸಂಘದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪ್ರಕಾಶ್ ಕೆ.ಎಸ್ ವಹಿಸಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೆ.ಎನ್ ಗಂಗಾಧರ ಆಳ್ವ, ವಸಂತಿ ಸಂಜೀವ ಪೂಜಾರಿ, ಜನಾರ್ಧನ ನಾಯ್ಕ, ಪೆರಾಜೆ, ಉಮೇಶ್ ಪಿ, ರೋಹಿತಾಶ್ವ, ರಮಣಿ ಲೋಬೋ, ಜನಾರ್ಧನ ನಲಿಕೆ, ರೂಪೇಶ್ ರೈ, ಅದ್ದ ಕೊಡಾಜೆ ಉಪಸ್ಥಿತರಿದ್ದರು.
2022-23ನೇ ವರ್ಷದ ಆಡಳಿತ ಮಂಡಳಿ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಪಿ. ಗೌತಮ್ ಶೆಣೈ CEO ವಾಚಿಸಿದರು. ರಾಮಕೃಷ್ಣ ಆಳ್ವ (CBBO)ನಬಾರ್ಡ್ನ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಅನನ್ಯಾ ಪ್ರಾರ್ಥಿಸಿ, ನಿರೂಪಿಸಿದರು. ಪ್ರಕಾಶ್ ಕೆ.ಎಸ್ ಸ್ವಾಗತಿಸಿದರು. ಸಂಘದ ಅಕೌಟೆಂಟ್ ನಳಿನಿ ಧನ್ಯವಾದವಿತ್ತರು.
- Advertisement -