Saturday, June 28, 2025
spot_imgspot_img
spot_imgspot_img

(ಮೇ.11): ಇರಂದೂರು ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ನಡೆಯುವ ಕಾರ್ಯಕ್ರಮದ ವಿವರ ಹೀಗಿವೆ

- Advertisement -
- Advertisement -

ಇಂದು ಪ್ರಾತಃ 7.00 ರಿಂದ ಮಹಾಗಣಪತಿ ಹೋಮ, ಉಷಾ ಪೂಜೆ, ನವಗ್ರಹ ಹೋಮ, 8.20 ಕ್ಕೆ ಸಲುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಪರಿವಾರ ದೇವತಾ ಕಲಶಾಭಿಷೇಕ, ನರಸಿಂಹ ಹೋಮ, ಉಳ್ಳಾಕು ಹಾಗೂ ಮಲರಾಯ ದೈವದ ಪ್ರತಿಷ್ಠೆ, ಕಲಶಾಭಿಷೇಕ ನಡೆದು ಬಳಿಕ ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ದೈವಗಳಿಗೆ ತಂಬಿಲ, ಋತ್ವಿಜ ಗೌರವಾರ್ಪಣೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5.00 . ರಿಂದ ದುರ್ಗಾಪೂಜೆ, ನಿಶೀಥ ಪೂಜೆ, ಶ್ರೀ ರಂಗ ಪೂಜಾರಾಧನೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಇಂದು ಬೆಳಿಗ್ಗೆ 10:30 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯೀ ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರು ಆಶೀರ್ವಚನ ನೀಡಲಿರುವರು.ಮಾಜಿ ಶಾಸಕಿ, ಪುತ್ತೂರು ಮತ್ತು ಮಾಜಿ ಮುಖ್ಯಮಂತ್ರಿಗಳ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಶಕುಂತಳ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಮತಿ ಸಿರಿ ಎಲ್.ಎನ್. ಕೂಡೂರುವಿಟ್ಲ ಗೌರವ ಉಪಸ್ಥಿತರಿರುವರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಾಜಿ ಸದಸ್ಯೆ ಶ್ರೀಮತಿ ಶ್ರೀಶಾ ವಾಸವು ತುಳುನಾಡ್ ಪ್ರಧಾನ ಭಾಷಣ ಮಾಡಲಿದ್ದಾರೆ.ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ, ಪಟ್ಟಣ ಪಂಚಾಯತ್‌ ಸದಸ್ಯೆ ಶ್ರೀಮತಿ ಲತಾ ಅಶೋಕ್‌ ಪೂಜಾರಿ ಮಚ್ಚ, ಶ್ರೀಮತಿ ಲ। ಪುಷ್ಪಲತಾ ವಿಟ್ಲ, ಶ್ರೀಮತಿ ಪುಷ್ಪಲತಾ ಸೀತಾರಾಮ ಶೆಟ್ಟಿ ವಕ್ಕೆತ್ತೂರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಬೆಳಿಗ್ಗೆ 9:00 ರಿಂದ ಪುರಂದರ ಅಂಚನ್, ಮಾತೃಶ್ರೀ ಇಂಜಿನಿಯರಿಂಗ್ ವರ್ಕ್, ಮಂಗಳಪದವು ಇವರ ಪ್ರಾಯೋಜಕತ್ವದಲ್ಲಿ ಕು। ಸುಕನ್ಯಾ ಸೇರಾಜೆ ಮತ್ತು ಬಳಗದವರಿಂದ ಸ್ವರ ಸಿಂಚನ ‘ಭಕ್ತಿ ರಸಮಂಜರಿ’ ನಡೆಯಲಿದೆ. ಮಧ್ಯಾಹ್ನ 1:00 ರಿಂದ ಸ್ಥಳೀಯರಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’ ಸಂಜೆ 6:00 ರಿಂದ ಶ್ರೀ ರಾಜೇಶ್ ವಿಟ್ಲ ಸಾರಥ್ಯದ ಆರ್. ಕೆ. ಯಕ್ಷಗಾನ ಕಲಾ ಕೇಂದ್ರ ವಿಟ್ಲ ಇವರಿಂದ ನಾಟ್ಯ ಮುಯೂರಿ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಇವರನಿರ್ದೇಶನದಲ್ಲಿ ‘ಲೀಲಾಮಾನುಷ ವಿಗ್ರಹ’ ಪೌರಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.

- Advertisement -

Related news

error: Content is protected !!