ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲೀಗ ಮತ್ತೊಂದು ಉಗ್ರವಾದಿ ಗುಂಪು ಸಕ್ರಿಯವಾಗಿದೆ. ಕಾಬೂಲ್ನಲ್ಲಿ ನಡೆದ ಸರಣಿ ಸ್ಫೋಟದ ಹಿಂದೆ ತನ್ನದೇ ಕೈವಾಡ ಇದೆ ಎಂದು ಐಸಿಸ್-ಕೆ ಹೊಣೆ ಹೊತ್ತುಕೊಂಡಿದೆ. ಈ ಐಸಿಸ್-ಕೆ ಮೊದಲ ಸ್ವಯಂ ಘೋಷಿತ ಇಸ್ಲಾಮಿಕ್ ಕ್ಯಾಲಿಫೇಟ್ ಎಂದು ಕರೆಯಲಾಗುತ್ತದೆ.
ತಾಲಿಬಾನ್ ಮತ್ತು ಐಸಿಸ್- ಕೆ ಗುಂಪುಗಳ ನಡುವೆ ಸೈದ್ದಾಂತಿಕ ವೈರತ್ವ ಇದೆ. ಹೀಗಾಗಿ ತಾಲಿಬಾನ್ ಹಿಡಿತ ಸಾಧಿಸಿದ್ದ ಕಾಬೂಲ್ ಅನ್ನು ಟಾರ್ಗೆಟ್ ಮಾಡಿದೆ. ತಾಲಿಬಾನಿ ವಿರೋಧಿ ಉಗ್ರ ಸಂಘಟನೆ ಐಸಿಸ್- ಕೆ ಹಲವು ದೇಶಗಳನ್ನು ಟಾರ್ಗೆಟ್ ಮಾಡಿಕೊಂಡಿದೆ. ಈ ಪೈಕಿ ಭಾರತವೂ ಒಂದು ಎಂಬ ಆಘಾತಕಾರಿ ವಿಚಾರ ಬಯಲಿಗೆ ಬಂದಿದೆ.
ಐಸಿಸ್- ಕೆ ಮುಂದಿನ ಟಾರ್ಗೆಟ್ ಭಾರತ ಎಂದು ದೇಶದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಐಸಿಸ್-ಕೆ ಸಂಘಟನೆಯ ಪೂರ್ಣ ಹೆಸರು ಇಸ್ಲಾಮಿಕ್ ಸ್ಟೇಟ್ ಖೋರಾಸನ್. ಇದು ರಚನೆಯಾದದ್ದು 2014ರಲ್ಲಿ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಐಸಿಸ್ ಅಂಗಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತಿರುವ ಈ ಗುಂಪು ಹಲವು ದೇಶಗಳಲ್ಲಿ ಇಸ್ಲಾಮಿಕ್ ಕ್ಯಾಲಿಫೇಟ್ ರೂಲ್ ಹೇರಿಕೆ ಮಾಡಬೇಕು ಎಂದು ಹೊರಟಿದೆ.
ಖೋರಾಸನ್ ಎಂಬುದು ಒಂದು ಐತಿಹಾಸಿಕ ಪದ. ಈ ಗುಂಪನ್ನು ISIS-K ಅಥವಾ IS-K ಎಂದು ಕರೆಯುತ್ತಾರೆ. ತಾಲಿಬಾನ್ ತೊರೆದವರೇ ISIS-K ಸ್ಥಾಪಕ ಸದಸ್ಯರು ಎಂಬುದು ಗಮನಾರ್ಹ.
ತಾಲಿಬಾನ್ ಆಸಕ್ತಿ ಅಫ್ಘಾನಿಸ್ತಾನಕ್ಕೆ ಸೀಮಿತವಾಗಿದ್ದರೆ, ಅದಕ್ಕಿಂತ ಭಿನ್ನವಾದ ಐಸಿಸ್- ಕೆ ಜಾಗತಿಕ ಐಎಸ್ ನೆಟ್ವರ್ಕ್ನ ಭಾಗವಾಗಿದೆ. ಎಲ್ಲಿಗೆ ತಲುಪಲು ಸಾಧ್ಯವೋ ಅಲ್ಲಿ ಮಾನವೀಯ ಗುರಿಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತದೆ. ಪ್ರಪಂಚದ ಮಾನವೀಯ ಗುರಿಗಳ ಮೇಲೆ ದಾಳಿ ನಡೆಸುವುದು, ಯುವಕರಿಗೆ ಟ್ರೈನಿಂಗ್ ನೀಡಿ ತಮ್ಮ ಸಂಘಟನೆ ಸೇರಿಸಿಕೊಳ್ಳುವುದು, ದೇಶಗಳಿಗೆ ಡ್ರಗ್ಸ್ ಹಾಗೂ ಜನರ ಕಳ್ಳಸಾಗಣೆ ಮಾಡುವುದು, ತಮ್ಮ ಅಂಜೆಡಾಗಳಿಗಾಗಿ ಕೆಲಸ ಮಾಡುವುದು ಇದರ ಉದ್ದೇಶ.
ಒಂದೆಡೆ ಜಿಹಾದಿ ಸಂಘಟನೆಗಳಲ್ಲೇ ಅತೀ ಕ್ರೂರವಾದ ಸಂಘಟನೆಯಾಗಿ ಗುರುತಿಸಿಕೊಂಡಿರುವ ISIS-K ಕಣ್ಣು ಭಾರತದ ಮೇಲೆ ಬಿದ್ದರೆ, ಇನ್ನೊಂದೆಡೆ ಪಾಕಿಸ್ತಾನ ಮತ್ತು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಜಮ್ಮು-ಕಾಶ್ಮೀರ ಸಂಪೂರ್ಣ ಕೈವಶ ಮಾಡಲು ಸಜ್ಜಾಗಿವೆ. ಜೈಶ್-ಏ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲೌನಾ ಮಸೂದ್ ಅಜರ್ ಕಾಬೂಲ್ನಲ್ಲಿ ತಾಲಿಬಾನ್ ನಾಯಕರನ್ನು ಭೇಟಿಯಾಗಿ ನೆರವು ಕೇಳಿದ್ದಾನೆ.
ಭಾರತದ ಮುಂಬೈ ಮತ್ತು ಕೇರಳದಿಂದ ಹಲವರು ಐಸಿಸ್ ಉಗ್ರ ಸಂಘಟನೆಗೆ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಒಂದೆಡೆ ಜೈಶ್-ಏ-ಮೊಹಮ್ಮದ್ ಉಗ್ರ ಸಂಘಟನೆ ಕಾಶ್ಮೀರ ಟಾರ್ಗೆಟ್ ಮಾಡಿದರೆ, ಇನ್ನೊಂದೆಡೆ ISIS-K ಕೇರಳ ಟಾರ್ಗೆಟ್ ಮಾಡಿದೆ. ಇದರಿಂದ ಭಾರತಕ್ಕೆ ದೊಡ್ಡ ಅಪಾಯವೊದಗಿ ಬಂದಿದೆ.