Monday, May 6, 2024
spot_imgspot_img
spot_imgspot_img

ವಿಟ್ಲ: “ವಿಠಲ ಸುಪ್ರಜಿತ್ ಖಾಸಗಿ ಐಟಿಐ ಘಟಿಕೋತ್ಸವ -2023”

- Advertisement -G L Acharya panikkar
- Advertisement -

ವಿಟ್ಲ:ವಿಠಲ ಸುಪ್ರಜಿತ್ ಖಾಸಗಿ ಐಟಿಐ ವಿಟ್ಲ ಇಲ್ಲಿನ 2021-23ನೇ ಸಾಲಿನ ಐಟಿಐ ತರಬೇತುದಾರರ ಘಟಿಕೋತ್ಸವ ಕಾರ್ಯಕ್ರಮವು ವಿಠಲ ಪ್ರೌಢಶಾಲಾ ಸಭಾಂಗಣದಲ್ಲಿ ಜರಗಿತು.

ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರು ಅಲ್ಫಾನ್ಸ್ ಸಿಲ್ವೆಸ್ಟರ್ ಮಾಸ್ಕರೇನ್ಹಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಸರಕಾರಿ ಐಟಿಐ ನ ಪ್ರಾಂಶುಪಾಲರು ಹರೀಶ್ ಕೋಟ್ಯಾನ್ ಹಾಗೂ ಶ್ರೀ ಸತೀಶ್ ಭಟ್ ಬಿಳಿನೆಲೆ ಮುಖ್ಯ ಗುರುಗಳು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ – ಮಕ್ಕಳು ಮುಂದಿನ ಜೀವನ ಹೇಗೆ ರೂಪಿಸಿಕೊಳ್ಳಬೇಕೆಂದು ಅರ್ಥವತ್ತಾಗಿ ವಿವರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ಪ್ರಾಂಶುಪಾಲ ರಮೇಶ್ ರೈ ಉಪಸ್ಥಿತರಿದ್ದರು. ಪ್ರಾಂಶುಪಾಲರು ಸ್ವಾಗತಿಸಿ, ಜೆಟಿಓ ಹರ್ಷಿತಾ ವಂದಿಸಿದರು. ಜೆಟಿಓ ಸಂತೋಷ್ ಅತಿಥಿಗಳನ್ನು ಪರಿಚಯಿಸಿದರೆ, ಜೆಟಿಓ ನಳಿನಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!