Friday, May 3, 2024
spot_imgspot_img
spot_imgspot_img

ಜೈನಮುನಿಯ ಭೀಕರ ಹತ್ಯೆ ಪ್ರಕರಣ; ತಾಲಿಬಾನಿ ಸಂಸ್ಕೃತಿಯನ್ನು ಹತ್ತಿಕ್ಕುವಲ್ಲಿ ಶೀಘ್ರ ಕ್ರಮಕೈಗೊಳ್ಳಿ- ಎಡನೀರು ಶ್ರೀ ಆಗ್ರಹ

- Advertisement -G L Acharya panikkar
- Advertisement -

ಚಿಕ್ಕೋಡಿ ತಾಲೂಕಿನ ಹೀರೆಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ 108 ಶ್ರೀ ಕಾಮಕುಮಾರ ನಂದೀ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ದೇಶದ ಧಾರ್ಮಿಕ ಜಗತ್ತೇ ದಿಗ್ಭಮೆ ಪಡುವಂತಹಾ ವಿಷಯವಾಗಿದೆ.

ಅಹಿಂಸೆಯನ್ನೇ ಪರಮೋಚ್ಛ ಧರ್ಮ ಎಂಬುದಾಗಿ ಅನುಷ್ಠಾನಗೊಳಿಸಿರುವ ಜೈನಮತದ ಮುನಿವರ್ಯರನ್ನು ಅತ್ಯಂತ ಹಿಂಸಾತ್ಮಕವಾಗಿ ಹತ್ಯೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ.

ಅತೀ ಉತ್ಕೃಷ್ಟವಾದಂತಹ ಧಾರ್ಮಿಕ ಪರಂಪರೆಯನ್ನು ಹೊಂದಿರುವಂತಹಾ ಭಾರತ ದೇಶ ನಮ್ಮದು. ಅಂತಹ ನಮ್ಮ ದೇಶದಲ್ಲಿ ಕಾಣಿಸಿಕೊಳ್ಳುವ ಇಂತಹಾ ತಾಲಿಬಾನಿ ಸಂಸ್ಕೃತಿಯನ್ನು ಹತ್ತಿಕ್ಕುವಲ್ಲಿ ಯಾವುದೇ ದಾಕ್ಷಿಣ್ಯಕ್ಕೊಳಗಾಗದೆ ಸರಕಾರ ಶೀಘ್ರ ಕ್ರಮಕೈಗೊಳ್ಳಬೇಕೆಂದು ಎಡನೀರು ಸಂಸ್ಥಾನದ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!