Friday, April 26, 2024
spot_imgspot_img
spot_imgspot_img

ಪುತ್ತೂರು: ಜಯಕರ್ನಾಟಕ ಜನಪರ ವೇದಿಕೆ ದ.ಕ ಜಿಲ್ಲೆ ವತಿಯಿಂದ ಗಾಂಧಿ ಜಯಂತಿ ಮತ್ತು ವಾರ್ಷಿಕೋತ್ಸವದ ಪ್ರಯುಕ್ತ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣಕನ್ನಡ ಜಿಲ್ಲೆ ವತಿಯಿಂದ ಗಾಂಧಿ ಜಯಂತಿ ಮತ್ತು ಜಯಕರ್ನಾಟಕ ಜನಪರ ವೇದಿಕೆಯ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವು ಇoದು ನಡೆಯಿತು.

ಸುಮಾರು 70 ಕ್ಕೂ ಅಧಿಕ ರೋಗಿಗಳ ಆರೋಗ್ಯ ವಿಚಾರಿಸಿ ಅವರಿಗೆ ಆತ್ಮ ಸ್ಥೈರ್ಯ ನೀಡಿ ಹಣ್ಣು ಹಂಪಲು ವಿತರಿಸಲಾಯಿತು.

ಪರಿಸರವಾದಿಗಳು ಮತ್ತು ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಂಸ್ಥೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ “ಬಿ.ಗುಣರಂಜನ್ ಶೆಟ್ಟಿ”ರವರ ಆಶಯದಂತೆ ಗಾಂಧಿ ಜಯಂತಿಯಂದು ಸ್ಥಾಪನೆಯಾದ ನಮ್ಮ ಸಂಘಟನೆಯ ವಾರ್ಷಿಕೋತ್ಸವವನ್ನು ಒಂದು ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದ ಪ್ರಕಾರ ಈ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರದ ರಾಮದಾಸ್ ಶೆಟ್ಟಿ
ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ,
ಪುತ್ತೂರು ತಾಲೂಕು ನಿಯೋಜಿತ ಅಧ್ಯಕ್ಷರಾದ ದೀಪಕ್ ಅಮೀನ್ ಬoಟ್ವಾಳ ತಾಲೂಕು ಉಸ್ತುವಾರಿಗಳಾದ ಜಗನ್ನಾಥ್ ರೈ ಮೇರಾವು ಉಪಸ್ಥಿತರಿದ್ದರು.

ಸದಸ್ಯರಾದ ಅಮರ್ ರೈ , ತಿಲಕ್ ರಾಜ್ ಶೆಟ್ಟಿ, ಸುಮಿತ್ ನಾಯ್ಕ್ , ಪುರಂದರ ರೈ, ವಿನೀಶ್ ಗೌಡ, ನವೀನ್ ರೈ ಕುತ್ಯಾಡಿ, ಸುನಿಲ್ ಸೋಮು, ನಂದಕುಮಾರ್, ಮನೋಜ್ ಆಳ್ವ, ಯಶವಂತ್ ಶೆಟ್ಟಿ, ಪ್ರಜ್ವತ್ ರೈ, ಮಹೇಶ್ ಶೆಟ್ಟಿ, ದಿಲೀಪ್, ಸಂದೀಪ್ ಉಪಸ್ಥಿತರಿದ್ದರು.

- Advertisement -

Related news

error: Content is protected !!