ವಿಟ್ಲ:- ವಿಟ್ಲ ಜೇಸಿ ಅಧ್ಯಕ್ಷರು ಜೇಸಿ ದಿನೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಜೇಸಿ ಸಪ್ತಾಹ-2020 ಕಾರ್ಯ ಕ್ರಮವು ವಿಠಲ ಪ್ರೌಢ ಶಾಲಾ ವಿಟ್ಲದಲ್ಲಿ ನಡೆಯಿತು.
ಜೇಸಿ ಸಪ್ತಾಹ – 2020 ಸೆಪ್ಟೆಂಬರ್ 09 ರಿಂದ 15 ತನಕ ನಡೆಯಲಿದೆ. ಸೆಪ್ಟೆಂಬರ್11ರಂದು ಶುಕ್ರವಾರ ಮೂರನೇ ದಿನದ ನಡೆದ “ ಉತ್ತಮ ಆರೋಗ್ಯ & ಯೋಗಕ್ಷೇಮ ಯೋಗ ಶಿಬಿರ ಮತ್ತು ಕ್ರೀಡಾಸಾಧಕರನ್ನು ಗುರುತಿಸುವಿಕೆ ” ಕಾರ್ಯಕ್ರಮ ಉದ್ಘಾಟನೆಯನ್ನು ಜೇಸಿ ಈಶ್ವರ ಭಟ್ ಪೂವಾಧೢಕ್ಷರು ಜೇಸಿ ವಿಟ್ಲ ಇವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಕಿರಣ್ ಕುಮಾರ್ ವಿಠಲ ಪ್ರೌಢಶಾಲಾ ಉಪಪ್ರಾಂಶುಪಾಲರು ಮತ್ತು ಜೇಸಿ ಜೈಕಿಶನ್ ವಲಯಾಧಿಕಾರಿಗಳು ವಲಯ 15 ಉಪಸ್ಥಿತರಿದ್ದರು.
ಯೋಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನು ಗುರುತಿಸಿ ಸನ್ಮಾನ ಮಾಡಲಾಯಿತು. ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಪ್ರಶಸ್ತಿ ಪಡೆದು ಸಾಧನೆಗೈದ ಈಶ್ವರ ಭಟ್ ರವರಿಗೆ , ಯೋಗ ಗುರು ಶಿಕ್ಷಕಿ ಉಷಲಕ್ಷ್ಮಿ ಐತಾಳ್, ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾಥಿನಿ ಹಸ್ತ ಎಸ್ ಜೈನ್ ರಿಗೆ ಸನ್ಮಾನಿಸಲಾಯಿತ್ತು.