Wednesday, May 8, 2024
spot_imgspot_img
spot_imgspot_img

ಜೆಸಿಐ ವಿಟ್ಲ ಘಟಕದಿಂದ ವಿಟ್ಲ ಪರಿಸರದ ಮೌನ ಸಾಧಕರಿಗೆ ಸನ್ಮಾನ

- Advertisement -G L Acharya panikkar
- Advertisement -

ವಿಟ್ಲ : ಜೆಸಿಐ ಸಪ್ತಾಹ 2023ರ ಪ್ರಯುಕ್ತ ಜೆಸಿಐ ವಿಟ್ಲ ಘಟಕದಿಂದ ವಿಟ್ಲ ಪರಿಸರದಲ್ಲಿ ಕಳೆದ 35 ವರ್ಷಗಳಿಂದ ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ಭಟ್, ವಿಠಲ ಶೆಟ್ಟಿ, ಕಳೆದ 57 ವರ್ಷಗಳಿಂದ ದಿನಪತ್ರಿಕೆ ವಿತರಿಸುತ್ತಿರುವ ಜಗದೀಶ್ ಭಟ್, 37ವರ್ಷಗಳಿಂದ ದಿನಪತ್ರಿಕೆಗಳ ಹಂಚಿಕೆದಾರರಾದ ರಾಜಮ್ಮ , 25 ವರ್ಷಗಳಿಂದ ವಾಹನ ಚಾಲಕ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಅಸ್ಲಾಂರವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜೆಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷ ಜೆಸಿ ರಶೀದ್ ವಿಟ್ಲ ರವರು ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಪೂರ್ವಾಧ್ಯಕ್ಷ ಜೆಸಿ ವಿಜಯ್ ಪಾಯಸ್, ಜೆಸಿ ದಿನೇಶ್ ವಿ. ಉಪಸ್ಥಿತರಿದ್ದರು. ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ಜೆಸಿ ಪರಮೇಶ್ವರ ಹೆಗಡೆ ಸಭಾಧ್ಯಕ್ಷತೆ ವಹಿಸಿದ್ದರು. ಸಪ್ತಾಹದ ನಿರ್ದೇಶಕ ಜೆಸಿ ರಿತೇಶ್ ಶೆಟ್ಟಿ, ಕಾರ್ಯದರ್ಶಿ ಜೆಸಿ ದೀಕ್ಷಿತ್ ಉಪಸ್ಥಿತರಿದ್ದರು. ವಿಟ್ಲ ಪರಿಸರದ ಮೌನ ಸಾಧಕರನ್ನು ಗುರುತಿಸಿ ಗೌರವಿಸಿದ ಈ ಕಾರ್ಯಕ್ರಮ ಸ್ಥಳೀಯರ ಪ್ರಶಂಸಗೆ ಪಾತ್ರವಾಯಿತು.

- Advertisement -

Related news

error: Content is protected !!