ಬೆಂಗಳೂರು: ಇನ್ನಾದರೂ ದೇವರ ಆಟ ಕಡಿಮೆಯಾಗಿ ಭಾರತದ ಜಿಡಿಪಿ ಏರುವಂತೆ ಮಾಡಲು ಪ್ರಾರ್ಥಿಸುವಂತೆ ಹೇಳಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ದೇಶದ ಜಿಡಿಪಿ ಕುಸಿತ ಹಿನ್ನಲೆಯಲ್ಲಿ ಟ್ವೀಟ್ ಮಾಡಿದ ದಿನೇಶ್ ಗುಂಡೂರಾವ್, ನಿರ್ಮಲಾ ಸೀತಾರಾಮನ್ ಅವರೇ, ಕರುಣಾಮಯಿಯಾದ ಆ ದೇವರು ಇಷ್ಟೊಂದು ಆಟವಾಡಬಾರದಿತ್ತು. ನಿಮ್ಮ ದೈವಾಂಶ ಸಂಭೂತ ಮೋದಿಯವರಿಗೆ ತಾವೇ ದೇವರು ಎಂಬ ಭ್ರಮೆ ಬಿಟ್ಟು, ಸಾಧ್ಯವಾದರೆ ನಿಜವಾದ ದೇವರ ಬಳಿ ಮಾತನಾಡಲು ಹೇಳಿ. ಇನ್ನಾದರೂ ದೇವರ ಆಟ ಕಡಿಮೆಯಾಗಿ ಭಾರತದ ಜಿಡಿಪಿ ಏರುವಂತೆ ಮಾಡಲು ಪ್ರಾರ್ಥಿಸುವಂತೆ ಹೇಳಿ ಎಂದು ಟೀಕಿಸಿದ್ದಾರೆ.
@nsitharaman ರವರೆ, ಕರುಣಾಮಯಿಯಾದ ಆ ದೇವರು ಇಷ್ಟೊಂದು ಆಟವಾಡಬಾರದಿತ್ತು.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 1, 2020
ನಿಮ್ಮ ದೈವಾಂಶ ಸಂಭೂತ
ಮೋದಿಯವರಿಗೆ ತಾವೇ ದೇವರು ಎಂಬ ಭ್ರಮೆ ಬಿಟ್ಟು, ಸಾಧ್ಯವಾದರೆ ನಿಜವಾದ ದೇವರ ಬಳಿ ಮಾತಾಡಲು ಹೇಳಿ.
ಇನ್ನಾದರೂ 'ದೇವರ ಆಟ' ಕಡಿಮೆಯಾಗಿ ಭಾರತದ ಜಿಡಿಪಿ ಏರುವಂತೆ ಮಾಡಲು ಪ್ರಾರ್ಥಿಸುವಂತೆ ಹೇಳಿ!! pic.twitter.com/F6NmcEP6V2