

ಅಳಕೆಮಜಲು : ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ.) ಅಶೋಕನಗರ ಅಳಕೆಮಜಲು ಇದರ ಆಶ್ರಯದಲ್ಲಿ ಎಸ್.ಎಲ್.ವಿ. ಗ್ರೂಪ್ ಇಂಡಿಯಾ ಪ್ರೈ.ಲಿ. ಮೈಸೂರು ಇದರ ಸಹಯೋಗದೊಂದಿಗೆ ದಿನಾಂಕ 23.06.2024ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10.00 ರಿಂದ ಸಾಧಕರಿಗೆ ಸನ್ಮಾನ ಮತ್ತು ಪುಸ್ತಕ ವಿತರಣೆಯು ಶ್ರೀ ಶಾರದಾಮಾತೆಯ ಸನ್ನಿಧಿಯಲ್ಲಿ ನಡೆಯಲಿರುವುದು.
ಜಗದೀಶ ಪೂಜಾರಿ ಅಳಕೆಮಜಲು ಅಧ್ಯಕ್ಷರು, ಶ್ರೀ ಶಾರದಾಂಬ ಭಜನಾ ಮಂಡಳಿ ಅಳಕೆಮಜಲು ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ದಿವಾಕರ ದಾಸ್ ನೇರ್ಲಾಜೆ, ಆಡಳಿತ ನಿರ್ದೇಶಕರು, ಎಸ್.ಎಲ್.ವಿ. ಗ್ರೂಪ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೈಸೂರು . ಡಾ| ಸುರೇಶ್ ಪುತ್ತೂರಾಯ ಖ್ಯಾತ ವೈದ್ಯರು ಮಹಾವೀರ ಆಸ್ಪತ್ರೆ ಪುತ್ತೂರು ಭಾಗವಹಿಸಲಿದ್ದಾರೆ., ಗೌರವ ಉಪಸ್ಥಿತಿಯಲ್ಲಿ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಸೋಮಶೇಖರ ಶೆಟ್ಟಿ, ಅಳಕೆಮಜಲು ಭಾಗವಹಿಸಲಿದ್ದಾರೆ. ರಾಮಕೃಷ್ಣ ಭಟ್ ಎಚ್.ಎಂ., ಎಸ್.ಡಿ.ಎಂ. ಹೈಸ್ಕೂಲ್, ಬೆಳಾಲು ಉಜಿರೆ ಇವರು ಉಪನ್ಯಾಸ ನೀಡಲಿದ್ದಾರೆ. ಎಂದು ಅಧ್ಯಕ್ಷರು / ಸರ್ವಸದಸ್ಯರು ಶ್ರೀ ಶಾರದಾಂಬ ಮಹಿಳಾ ಸಮಿತಿ ಅಳಕೆಮಜಲು ಮತ್ತು ಅಧ್ಯಕ್ಷರು / ಸರ್ವಸದಸ್ಯರು ಶ್ರೀ ಶಾರದಾಂಬ ಭಜನಾ ಮಂಡಳಿ (ರಿ.) ಅಳಕೆಮಜಲು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿ.ಸೂ.
- ನಮ್ಮ ಭಜನಾ ವ್ಯಾಪ್ತಿಯ 1 ರಿಂದ 10ನೇ ತರಗತಿ ಒಳಗಿನ ಆಯ್ದ ಮಕ್ಕಳಿಗೆ ಪುಸ್ತಕ ವಿತರಣೆಯು
ನಡೆಯಲಿದ್ದು ಆಯ್ದ ಮಕ್ಕಳಿಗೆ ಪುಸ್ತಕ ವಿತರಣೆಯ ಟೋಕನ್ ನೀಡಲಾಗುತ್ತದೆ. - ಪುಸ್ತಕ ಪಡಕೊಳ್ಳುವವರು ಟೋಕನ್ ತೋರಿಸಿ ಆ ದಿನ ಮಾತ್ರ ಪಡೆದುಕೊಳ್ಳಲು ಅವಕಾಶವಿದೆ.
- ಸಂಪರ್ಕ ಮೊಬೈಲ್ : 8197172805, 9591065326.
