Friday, April 19, 2024
spot_imgspot_img
spot_imgspot_img

ಕಬಕ: ಖಾಲಿ ಜಾಗಕ್ಕೆ ಖಾಸಗಿ ವ್ಯಕ್ತಿಯಿಂದ ಬೇಲಿ; ಸೂಕ್ತ ತನಿಖೆಯಾಗುವಂತೆ ಸಾರ್ವಜನಿಕರ ಒತ್ತಾಯ

- Advertisement -G L Acharya panikkar
- Advertisement -

ಕಬಕ ಗೀತಾ ಬಾರ್ ಎದುರಿನ ಖಾಲಿ ಜಾಗಕ್ಕೆ ಖಾಸಗಿ ವ್ಯಕ್ತಿಯೋರ್ವರು ಬೇಲಿ ಹಾಕಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಖಾಸಗಿ ವ್ಯಕ್ತಿಯೊಬ್ಬರು ಈ ಜಾಗಕ್ಕೆ ಮಣ್ಣು ಹಾಕುವ ವೇಳೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸರು ಬಂದು ಮಣ್ಣು ಹಾಕಬಾರದು ಹಾಗೂ ಈ ಜಾಗವನ್ನು ಸರ್ವೆ ಮಾಡಬೇಕೆಂದು ಹೇಳಿರುತ್ತಾರೆ. ಆದ್ರೆ ಇದನ್ನೂ ಪರಿಗಣಿಸದ ವ್ಯಕ್ತಿ ನಿನ್ನೆ ರಾತ್ರಿ 10ಗಂಟೆಯ ನಂತರ ಮಣ್ಣು ಹಾಕಿ ಬೇಲಿ ಹಾಕಿದ ಘಟನೆ ನಡೆದಿದೆ.

ಈ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು ಮಾನ್ಯ ಶಾಸಕರು ಹಾಗೂ ಕಬಕ ಪಂಚಾಯತ್ ಇತ್ತ ಕಡೆ ಗಮನ ಹರಿಸಬೇಕು. ಇಲ್ಲಿ ರಾತ್ರಿ 10 ಗಂಟೆಯ ನಂತರ ಮಣ್ಣು ಹಾಕಿ ಬೇಲಿ ಹಾಕಲು ಕಾರಣವೇನು.? ಇದು ಅಕ್ರಮವೇ? ಸಂಬಂಧ ಪಟ್ಟ ಇಲಾಖೆಯಿಂದ ತನಿಖೆಯಾಗಬೇಕು ಎಂಬ ಮಾತುಗಳು ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

- Advertisement -

Related news

error: Content is protected !!