![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
![](https://vtvvitla.com/wp-content/uploads/2024/04/vigneshwara-new-683x1024.jpeg)
![](https://vtvvitla.com/wp-content/uploads/2022/01/indane-gas-2-1024x748.jpg)
ಕಡಬ: ಆಟೋರಿಕ್ಷಾವೊಂದರಲ್ಲಿ ಯಾವುದೇ ಪರವಾನಿಗೆಯನ್ನು ಹೊಂದದೇ, ಮಾಂಸವನ್ನು ಮಾರಾಟ ಮಾಡಿ, ಹಣಗಳಿಸುವ ಉದ್ದೇಶದಿಂದ ಜಾನುವಾರು ವಧೆ ಮಾಡಿ, ಮಾಂಸವನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಘಟನೆ ಕಡಬ ತಾಲೂಕು ರಾಮಕುಂಜ ಗ್ರಾಮದ ಅಮೈ ಎಂಬಲ್ಲಿ ನಡೆದಿದೆ.
ಆರೋಪಿಗಳನ್ನು ಚಾಲಕ ಅಬ್ದುಲ್ಲಾ ಹಾಗೂ ಕೊಯಿಲಾ ಗ್ರಾಮ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಕಡಬ ತಾಲೂಕು ರಾಮಕುಂಜ ಗ್ರಾಮದ ಅಮೈ ಎಂಬಲ್ಲಿ ಅನುಮಾನಾಸ್ಪದವಾಗಿ ಸಾಗುತ್ತಿದ್ದ ಆಟೋರಿಕ್ಷಾವನ್ನು ಅಭಿನಂಧನ್ ಎಂ.ಎಸ್, ಪೊಲೀಸ್ ಉಪ-ನಿರೀಕ್ಷಕರು, ಕಡಬ ಪೊಲೀಸು ಠಾಣೆರವರು ಸಿಬ್ಬಂದಿಗಳೊಂದಿಗೆ ತಡೆದು ಪರಿಶೀಲಿಸಿದಾಗ ಅಟೋದಲ್ಲಿ ಒಟ್ಟು ಅಂದಾಜು 62 ಕೆ.ಜಿ ತೂಕದ ದನದ ಮಾಂಸ ಇರುತ್ತದೆ. ಹಾಗೂ ದನವನ್ನು ವಧೆ ಮಾಡಲು ಉಪಯೋಗಿಸಿದ ಮರದ ತುಂಡು -01 ಮತ್ತು ಕಬ್ಬಿಣದ ಸತ್ತಾರ್ಗಳು-02 ಚಾಕು -02 ಪತ್ತೆಯಾಗಿರುತ್ತದೆ. ಈ ಬಗ್ಗೆ ರಿಕ್ಷಾ ಚಾಲಕ ಅಬ್ದುಲ್ಲಾನನ್ನು ವಿಚಾರಿಸಿದಾಗ ಇಸ್ಮಾಯಿಲ್ ಎಂಬಾತನೊಂದಿಗೆ ಸೇರಿ, ಯಾವುದೇ ಪರವಾನಿಗೆಯನ್ನು ಹೊಂದದೇ, ಮಾಂಸವನ್ನು ಮಾರಾಟ ಮಾಡಿ, ಹಣಗಳಿಸುವ ಉದ್ದೇಶದಿಂದ ಜಾನುವಾರು ವಧೆ ಮಾಡಿ, ಮಾಂಸವನ್ನು ಮಾರಾಟಕ್ಕಾಗಿ ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾನೆ.
ಮುಂದಿನ ಕಾನೂನುಕ್ರಮಕ್ಕಾಗಿ ಮಾಂಸವನ್ನು ಹಾಗೂ ಅಟೋರಿಕ್ಷಾವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ :72/2024.ಕಲಂ: 4.5.12 ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 ಮತ್ತು ಕಲಂ:66,192(A) IMV Act. ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.