- Advertisement -
- Advertisement -
ಕಡಬ: ಹಾಲು ತರಲೆಂದು ಪೇಟೆಗೆ ಹೋಗಿ ನಾಪತ್ತೆಯಾಗಿದ್ದ ಅಪ್ರಾಪ್ತೆಯನ್ನು ಕಡಬ ಪೊಲೀಸರು ಐದೇ ದಿನದಲ್ಲಿ ಮೈಸೂರಿನಲ್ಲಿ ಪತ್ತೆ ಹಚ್ಚಿ ನ.30 ರಂದು ಠಾಣೆಗೆ ಹಾಜರುಪಡಿಸಿದ್ದಾರೆ.
ಬಿಳಿನೆಲೆ ಗ್ರಾಮದ ಮದೆಪರ್ಲ ದ ಅಪ್ರಾಪ್ತೆ.26 ರಂದು ನಾಪತ್ತೆಯಾಗಿದ್ದಳು. ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರ ನಿರ್ದೇಶನದಂತೆ ಸಹಾಯಕ ಪೊಲೀಸ್ ಉಪನಿರೀಕ್ಷಕ ಸಿಟಿ ಸುರೇಶ್ ಮತ್ತು ಹೆಡ್ ಕಾನ್ಸ್ಟೇಬಲ್ ಹರೀಶ್ ರವರು ಪೈಸೂರಿಗೆ ತೆರಳಿ ಪತ್ತೆ ಮಾಡಿದ್ದಾರೆ.
ಹುಡುಗಿಯ ಪತ್ತೆಗೆ ಪೊಲೀಸ್ ಅಧೀಕ್ಷಕರ ಕಚೇರಿಯ ಡಿ ಎಸ್ ಬಿ ಪೊಲೀಸ್ ನಿರೀಕ್ಷಕರಾದ ರವಿ ಬಿಎಸ್ ಮತ್ತು ಕಂಪ್ಯೂಟರ್ ವಿಭಾಗದ ದಿವಾಕರ ರವರು ಸಹಕರಿಸಿದ್ದಾರೆ.
- Advertisement -