- Advertisement -
- Advertisement -
ಕಲಬುರಗಿ: ನಾಯಿಗೆ ಪಕ್ಕದ ಮನೆಯವ ಪದೇ ಪದೇ ಕಲ್ಲು ಹೊಡೆಯುತ್ತಾನೆಂದು ಕೋಪಗೊಂಡ ವ್ಯಕ್ತಿ ಮಾತುಕಥೆಗೆಂದು ಕರೆದು ನಾಯಿ ಮಾಲಿಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿಯ ಹೈಕೋರ್ಟ್ ಮುಂಭಾಗದ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ.
ಗುರುರಾಜ್ ಕುಲಕರ್ಣಿ(35) ಕೊಲೆಯಾದವರು. ಮೃತ ಗುರುರಾಜ ಸಾಕಿದ್ದ ನಾಯಿಗೆ ಪಕ್ಕದ ಮನೆಯವ ಪವನ್ ಜಾಗಿರ್ದಾರ್ ಪದೇ ಪದೇ ಕಲ್ಲು ಹೊಡೆಯುತ್ತಿದ್ದ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಕೂಡ ಇದೇ ಕಾರಣಕ್ಕೆ ಜಗಳವಾಗಿತ್ತು. ಸೆ. 23 ರಂದು ಈ ವಿಚಾರವಾಗಿ ಸಂಧಾನ ಮಾಡಿಕೊಳ್ಳೋಣ ಬಾ ಎಂದು ಪವನ್ ಹಾಗೂ ಆತನ ಗೆಳೆಯರು ಗುರುರಾಜ ಅವರನ್ನು ಕರೆದಿದ್ದಾರೆ ಎನ್ನಲಾಗಿದೆ.
ಮಾತುಕತೆ ನಡೆಯುತ್ತಿದ್ದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಹೊಡೆದಾಡುವ ವೇಳೆ ಗುರುರಾಜ ಅವರ ಮೇಲೆ ಪವನ್ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಗುರುರಾಜ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ಎಂದು ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
- Advertisement -