Thursday, May 2, 2024
spot_imgspot_img
spot_imgspot_img

ಕಲ್ಲಡ್ಕ: ಶ್ರೀರಾಮ ಶಿಶು ಮಂದಿರ ಕಲ್ಲಡ್ಕ ಇದರ ವತಿಯಿಂದ ಸುಧೆಕ್ಕಾರು ಶ್ರೀ ರಕ್ತೇಶ್ವರಿ ದೈವಸ್ಥಾನದ ಆವರಣದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

- Advertisement -G L Acharya panikkar
- Advertisement -

ಕಲ್ಲಡ್ಕ: ಶ್ರೀರಾಮ ಶಿಶು ಮಂದಿರ ಕಲ್ಲಡ್ಕ ಇದರ ವತಿಯಿಂದ ಸುಧೆಕ್ಕಾರು ಶ್ರೀ ರಕ್ತೇಶ್ವರಿ ದೈವಸ್ಥಾನದ ಆವರಣದಲ್ಲಿ ಆ.25 ರಂದು ಶುಕ್ರವಾರ ಬೆಳಿಗ್ಗೆ 09 ರಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಅರ್ಚಕ ನಿತ್ಯಾನಂದ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಅನೇಕ ಮಹಿಳೆಯರು ಈ ಕಾರ್ಯಕ್ರಮದಲ್ಲಿ ವೃತಧಾರಿಗಳಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮದ ವಿಶೇಷತೆ ಹಾಗೂ ಸಮಾಜದಲ್ಲಿ ಮಹಿಳೆಯರಿಗೆ ಇರುವ ಸ್ಥಾನಮಾನ ಹಾಗೂ ಗೌರವಗಳನ್ನು ತಿಳಿಸಿಕೊಟ್ಟು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೈವಸ್ಥಾನದ ಉಪಾಧ್ಯಕ್ಷ ದಿವಾಕರ ಶೆಟ್ಟಿ ಸುಧೆಕ್ಕಾರು ಇವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕ್ಷಿತಾ ಜೆ. ಆರ್ ಪ್ರಾರ್ಥಿಸಿ, ಸುಜಾತ. ಟಿ. ಸ್ವಾಗತಿಸಿ, ಲಕ್ಷ್ಮಿಗೋಪಾಲ ಆಚಾರ್ಯ ವಂದಿಸಿದರು. ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!