Monday, June 30, 2025
spot_imgspot_img
spot_imgspot_img

ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ರುದ್ರಪಾರಾಯಣ

- Advertisement -
- Advertisement -

ಮೇ. 2,3,4 ಅತೀ ಮಹಾರುದ್ರಯಾಗ

ಕಲ್ಲಡ್ಕ: ಮೊಗರ್ನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2,3,4 ರಂದು ವಿಧ್ವನ್ ಅನಂತ್ ಭಟ್ ಓಣಿಬೈಲು ನೇತೃತ್ವದಲ್ಲಿ ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.

ರಾಷ್ಟ್ರ ರಾಜ್ಯ ಮಟ್ಟದ ಪ್ರಮುಖರು ಯಾಗದಲ್ಲಿ ಭಾಗವಹಿಸಲಿದ್ದಾರೆ. ವಾರಾಣಾಸಿ ಕಾಶಿಮಠ ಶ್ರೀಮದ್ ಕಾಶಿಜ್ಞಾನ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಈ ಯಾಗ ನಡೆಯಲಿದೆ. ಚಿತ್ರದುರ್ಗದ ಬಹ್ಮಾನಂದ ರೆಡ್ಡಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸುಮಾರು ಐದು ಕೋಟಿ ರೂ. ವೆಚ್ಚ ಅಂದಾಜಿಸಿದೆ. 400 ಮಂದಿ ಋತ್ವಿಜರು, 14,641 ಸಂಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಣೆ ನಡೆಸುವ ಮೂಲಕ ಯಾಗ ನಡೆಯಲಿದೆ.

ರುದ್ರಪಾರಾಯಣದಲ್ಲಿ ಅತಿಮಹಾರುದ್ರ ಯಾಗದ ಅಧ್ಯಕ್ಷಬ್ರಹ್ಮನಂದ ರೆಡ್ಡಿ ದೀಪ ಬೆಳಗಿ ಚಾಲನೆ ನೀಡಿದರು. ಗೌರವಾಧ್ಯಕ್ಷ ರಘುನಾಥ್ ಸೋಮಯಾಜಿ, ಕಾರ್ಯಧ್ಯಕ್ಷ ಜಗನ್ನಾಥ್ ಚೌಟ ಬದಿಗುಡ್ಡೆ ಮಾಣಿ, ಶ್ರೀನಿವಾಸ್ ರೆಡ್ಡಿ ಪ್ರಾಂಶುಪಾಲರು ಚಿತ್ರದುರ್ಗ, ಬರೀಮಾರು ಗಣೇಶ್ ರಾವ್, ಡಾ ಸೂರಜ್ ಶೆಟ್ಟಿ ಮಂಗಳೂರು,ದೇವರ ಕಟ್ಟೆ ಸಮಿತಿ k. C ರೋಡ್, ಮಹಾಗಣೇಶ್ ಗೆಳೆಯರ ಬಳಗ, ಲಕ್ಷ್ಮೀದೀಪೋತ್ಸವ ದೇವರ ಕಟ್ಟೆ ಕುಂಟಿಪಾಪು ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Related news

error: Content is protected !!