ವಿಟ್ಲ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಚಂದಳಿಕೆ, ವಿಟ್ಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಚಂದಳಿಕೆ ವಿಟ್ಲ ಇದರ 24ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಉದ್ಘಾಟನ ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮಗಳು ಚಂದಳಿಕೆಯ ಮಂಗಳ ಮಂಟಪದಲ್ಲಿ ನಡೆಯಿತು.
ಪೂರ್ವಾಹ್ನ ಗಣಪತಿ ಹೋಮ, ಮೂರ್ತಿ ಪ್ರತಿಷ್ಠೆ, ನಂತರ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿಯ ಉಪಾಧ್ಯಕ್ಷ ಸೇಸಪ್ಪ ಆಚಾರ್ಯ ವರು ಧ್ವಜಾರೋಹಣ ನೆರವೇರಿಸಿದರು. ದೀಪಾಬೆಳಗಿಸಿ ಉದ್ಘಾಟನೆಯನ್ನು ರಕ್ಷಿತಾ ಸನತ್ ನಿಡ್ಯ ಚಂದಳಿಕೆ ಸದಸ್ಯರು ವಿಟ್ಲ ಪಟ್ಟಣಪಂಚಾಯತ್ ನೆರವೇರಿಸಿದರು.
ಬಳಕ ಧೂಮಾವತಿ ಸ್ವ-ಸಹಾಯ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಟ್ಲ ಮೂಡೂರು, ವಿಟ್ಲ ವಲಯ ಇವರಿಂದ ಭಜನೆ ನಡೆದು ಬಳಿಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದ ವಿ ಶಾರದಾ ಡಾ| ಪಿ.ಕೆ. ದಾಮೋದರರವರ ಶಿಷ್ಯರಾದ ಕುಮಾರಿ ತೃಷಾ ಜಿ.ಯಸ್. ಮತ್ತು ಮಾಸ್ಟರ್ ಚಿಂತನ್ ಇವರು ಸ್ಯಾಕ್ಸೋಫೋನ್ ವಾದನ ಮೂಲಕ ಜನರ ಗಮನ ಸೆಳೆದರು.
ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.