Sunday, June 29, 2025
spot_imgspot_img
spot_imgspot_img

ಕಲ್ಲಡ್ಕ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ. ‘ಸಮೃದ್ಧಿ’ ನೂತನ ಕಟ್ಟಡ ಉದ್ಘಾಟನೆ ಹಾಗೂ ಕಲ್ಲಡ್ಕ ಶಾಖೆ ಸ್ಥಳಾಂತರ ಕಾರ್ಯಕ್ರಮ

- Advertisement -
- Advertisement -

ಕಲ್ಲಡ್ಕ: ನೂತನ ಕಟ್ಟಡ ’ಸಮೃದ್ಧಿ’ಯ ಉದ್ಘಾಟನೆ ಹಾಗೂ ಸ್ವಂತ ಕಟ್ಟಡಕ್ಕೆ ’ಕಲ್ಲಡ್ಕ ಶಾಖೆ’ಯ ಸ್ಥಳಾಂತರ ಕಾರ್ಯಕ್ರಮವು ನ. 25 ನೇ ಸೋಮವಾರ ’ಸಮೃದ್ಧಿ ಕಲ್ಲಡ್ಕ’ ಇಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಹೆಚ್‌‌. ಜಗನ್ನಾಥ ಸಾಲಿಯಾನ್‌ ವಹಿಸಿದ್ದರು.

ನೂತನ ಕಟ್ಟಡದ ಉದ್ಘಾಟನೆಯನ್ನು ಡಾ. ಪ್ರಭಾಕರ ಭಟ್‌‌ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿಧ್ಯಾವರ್ಧಕ ಸಂಘ ಪುತ್ತೂರು ಇವರು ನೆರವೇರಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭದ್ರತಾ ಕೊಠಡಿ ಉದ್ಘಾಟನೆಯನ್ನು ರುಕ್ಮಯ್ಯ ಪೂಜಾರಿ ಮಾಜಿ ಶಾಸಕರು, ಕಟ್ಟಡದ ಹೆಸರನ್ನು ಕಿಶೋರ್‌ ಕುಮಾರ್‌‌ ಪುತ್ತೂರು ವಿಧಾನ ಪರಿಷತ್‌‌ ಸದಸ್ಯ ಅನಾವರಣಗೊಳಿಸಿದರು. ಶಾಖೆಯ ಗಣಕೀರಣ ಉದ್ಘಾಟನೆಯನ್ನು ಕೆ. ಪದ್ಮನಾಭ ಕೊಟ್ಟಾರಿ ಮಾಜಿ ಶಾಸಕರು ಹಾಗೂ ಅಧ್ಯಕ್ಷರು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ(ನಿ.) ಕಲ್ಲಡ್ಕ ಇವರು ನೆರವೇರಿಸಿದರು.

ಬ್ಯಾಂಕ್‌ನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪ್ರಭಾಕರ ಭಟ್‌‌ ಕಲ್ಲಡ್ಕ ಅಧ್ಯಕ್ಷರು ವಿವೇಕಾನಂದ ವಿಧ್ಯಾವರ್ಧಕ ಸಂಘ ಪುತ್ತೂರು ಅವರು ವಿಟ್ಲಸಹಕಾರ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಟ್ಟ ಸಂಸ್ಥೆ ಇದು. ಸಂಸ್ಥೆಯನ್ನು ಬೆಳೆಸುವಲ್ಲಿ ಬಹಳಷ್ಟು ಹಿರಿಯರ ಶ್ರಮವಿದೆ. ಹಿರಿಯರ ಆಶಯವನ್ನು ಈಡೇರಿಸುವ ಕೆಲಸ ಇಲ್ಲಿ ಆಗಿದೆ. ಗ್ರಾಹಕರ ಸಮಸ್ಯೆಗೆ ತಕ್ಷಣ ಸ್ಪಂಧಿಸುವ ಕೆಲಸ ಸಹಕಾರ ಸಂಘದಿಂದ ಆಗುತ್ತಿದೆ. ಕಲ್ಲಡ್ಕದ ಜನತೆಗೆ ಬೇರೆ ಬೇರೆ ರೀತಿಯಲ್ಲಿ ಸಹಕಾರ ಸಂಘದಿಂದ ಆಗಿದೆ‌. ಸಂಸ್ಥೆ ಪ್ರಾಮಾಣಿಕತನದ ಜೊತೆಯಾಗಿ‌ ಸಾಗಿದೆ. ಸಂಸ್ಥೆ ಸಮೃದ್ಧಿಯತ್ತ ಸಾಗಲಿ ಎಂದು ಹೇಳಿದರು.

ಬಳಿಕ ಕೆ. ಪದ್ಮನಾಭ ಕೊಟ್ಟಾರಿ ಮಾಜಿ ಶಾಸಕರು ಹಾಗೂ ಅಧ್ಯಕ್ಷರು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ(ನಿ.) ಕಲ್ಲಡ್ಕರವರು ಮಾತನಾಡಿ ಬಹಳಷ್ಟು ವೇಗವಾಗಿ ಬೇಳೆಯುತ್ತಿರುವ ಪೇಟೆ‌ ಕಲ್ಲಡ್ಕ. ಇಲ್ಲಿಯವರು ಬೆಳೆಯುವುದರ ಜೊತೆಗೆ ಬಂದವರನ್ನು‌ ಬೆಳೆಸುವ ಜಾಯಮಾನ ನಮ್ಮದಾಗಿದೆ. ಇದೊಂದು ಬಹಳ ಸುಂದರ ಕಟ್ಟಡವಾಗಿದೆ. ಬಹಳ ಇತಿಹಾಸ ಸಾರುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌.ಆರ್‌‌‌ ಸತೀಶ್ಚಂದ್ರ ನಿರ್ದೇಶಕರು ಕ್ಯಾಂಪ್ಕೋ ಲಿ. ಮಂಗಳೂರು, ವಿಧಾನ ಪರಿಷತ್‌ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಪುರುಷೋತ್ತಮ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಮೋಹನ್ ಕೆ. ಎಸ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್, ನಿರ್ದೇಶಕ ಹರೀಶ್ ನಾಯಕ್ ಯಂ‌, ಮನೋರಂಜನ್ ಕೆ.ಆರ್, ವಿಶ್ವನಾಥ ಎಂ, ಉದಯ ಕುಮಾರ್ ಎ, ಬಾಲಕೃಷ್ಣ ಪಿ. ಎಸ್, ಜಯಂತಿ ಎಚ್. ರಾವ್, ಶುಭಲಕ್ಷ್ಮೀ, ಗೋವರ್ಧನ ಕುಮಾರ್ ಐ, ದಯಾನಂದ ಆಳ್ವ, ಸುಂದರ ಡಿ, ದಿವಾಕರ ವಿ, ಮತ್ತು ಕೇಂದ್ರ ಕಚೇರಿ ಹಾಗೂ ಶಾಖಾ ಕಚೇರಿಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ವಿಶ್ವನಾಥ್ ಎಂ. ಸ್ವಾಗತಿಸಿದರು. ನಿರ್ದೇಶಕರಾದ ಜಯಂತಿ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷ ಮೋಹನ್ ಕೆ. ಎಸ್ ವಂದಿಸಿದರು.

- Advertisement -

Related news

error: Content is protected !!