- Advertisement -
- Advertisement -
ಕಲ್ಲಡ್ಕ: ಮಂಗಳೂರು-ಬೆಂಗಳೂರು ರಾಷ್ಟ್ರೀಯ 75ರ ಬಿಸಿರೋಡ್ ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಮತ್ತೆ ಚುರುಕುಗೊಂಡಿದೆ. ಈ ಹಿನ್ನಲೆಯಲ್ಲಿ ಬಿ. ಸಿ. ರೋಡ್ನಿಂದ ಅಡ್ಡಹೊಳೆಯವರೆಗೆ ರಸ್ತೆ ಬದಿಯಲ್ಲಿದ್ದ ಎಲ್ಲಾ ಅಂಗಡಿಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅಂತೆಯೇ ಕಲ್ಲಡ್ಕದ ಜನಪ್ರಿಯ ಲಕ್ಷ್ಮೀ ನಿವಾಸ ಹೋಟೆಲ್ ಕೂಡ ತೆರವುಗೊಂಡಿದೆ.
ಈ ರಸ್ತೆ ಕಾಮಗಾರಿಗಾಗಿ ರಾಷ್ಟ್ರ ಮಟ್ಟದಲ್ಲಿ ಸ್ಪೆಷಲ್ ಚಹಾದ ಮೂಲಕವೇ ಪ್ರಸಿದ್ಧಿಯನ್ನು ಪಡೆದ ಕಲ್ಲಡ್ಕ ಲಕ್ಷ್ಮೀ ನಿವಾಸ ಹೊಟೇಲ್ ಕೂಡಾ ತೆರವು ಮಾಡಲಾಗಿದೆ. ಭಾರೀ ಪ್ರಸಿದ್ಧಿಯನ್ನು ಪಡೆದಿದ್ದ ಈ ಹೋಟೆಲ್ ಇನ್ನು ನೆನಪು ಮಾತ್ರ. ದಿನನಿತ್ಯ ಈ ಹೋಟೆಲ್ಗೆ ನೂರಾರು ಗ್ರಾಹಕರು ಬರುತ್ತಿದ್ದರು.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರು ಕಲ್ಲಡ್ಕದಲ್ಲಿ ಒಂದು ಚಹಾ ವಿರಾಮ ನೀಡಿ, ಲಕ್ಷ್ಮಿ ನಿವಾಸ ಹೋಟೇಲ್ನಲ್ಲಿ ಸ್ಪೆಷಲ್ ಕೆ. ಟಿ. ಯನ್ನು ಕುಡಿದು ಹೋಗುತ್ತಿದ್ದದ್ದು ಇನ್ನು ಇತಿಹಾಸವಾಗಲಿದೆ.
- Advertisement -