Saturday, April 20, 2024
spot_imgspot_img
spot_imgspot_img

ಕಾಂತರದ ಬಗ್ಗೆ ಸುರಯ್ಯ ಅಂಜುಮ್ ಹೀಗಂದ್ರು..!

- Advertisement -G L Acharya panikkar
- Advertisement -

ಭಾರತೀಯ ಸಿನೆಮಾ ರಂಗದಲ್ಲಿ ಹೊಸ ಅಧ್ಯಾಯ ಸೃಷ್ಟಿ ಮಾಡಿರುವ ಅಪ್ಪಟ ದೇಸಿ ಸೊಬಗಿನ ಸಿನೆಮಾ ಕಾಂತಾರ..! ಅದೂ ಕೂಡ ಕನ್ನಡದ ಸಿನೆಮಾ…! ಮೊದಲ ದಿನದಿಂದಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಈ ಸಿನೆಮಾ ಸೂಪರ್‍ ಹಿಟ್‌ ಆಗಿದೆ.

ಸಿನೆಮಾ ನೋಡಿದವರೆಲ್ಲಾ ಕಾಂತಾರವನ್ನು ಹಾಡಿ ಹೊಗಳಿದ್ದಾರೆ. ತುಳುನಾಡಿದ ದೈವರಾಧನೆಯನ್ನು ಅಚ್ಚುಕಟ್ಟಾಗಿ ತೋರಿಸುವಲ್ಲಿ ನಟ ನಿರ್ದೇಶಕ ರಿಷಭ್ ಶೆಟ್ಟಿ ೧೦೦% ಯಶಸ್ವಿಯಾಗಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್‌ ವಕ್ತಾರೆ ಸುರಯ್ಯ ಅಂಜುಮ್ ಅವರು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪೇಜ್‌ನಲ್ಲಿ ವೀಡಿಯೋ ಮಾಡಿರುವ ಅವರು ಧರ್ಮ ಬೇರೆ ಆಗಿರಬಹುದು ಆದರೆ ತುಳುನಾಡಿದ ಮಣ್ಣಿನ ಋಣ ನಮ್ಮ ಮೇಲಿದೆ. ಕಾಂತಾರ ಕೇವಲ ಸಿನೆಮಾ ಅಲ್ಲ, ನಮ್ಮ ಭಾವನೆಗಳ ಪ್ರತೀಕ. ಹ್ಯಾಟ್ಸ್‌ ಆಫ್ ರಿಷಭ್ ಶೆಟ್ಟಿ ಫಿಲಮ್ಸ್. ಎಂದಿದ್ದಾರೆ.

WATCH VIDEO: https://fb.watch/g2c1PTaAWt/

ಸುರಯ್ಯ ಅಂಜುಮ್ ಅವರು ಹಿಜಾಬ್ ವಿವಾದ ಸಂದರ್ಭದಲ್ಲಿ ಹಿಜಾಬ್‌ಗಿಂತ ಶಿಕ್ಷಣವೇ ಮುಖ್ಯ. ವಿದ್ಯಾದೇಗುಲಕ್ಕೆ ತೆರಳುವಾಗ ನಾವೆಲ್ಲಾ ಭಾರತೀಯರು ಎಂದು ಮನಸ್ಸಿನಲ್ಲಿರಬೇಕು ಎಂದು ಬುದ್ಧಿವಾದ ಹೇಳಿ ಸುದ್ದಿಯಾಗಿದ್ದರು.

astr
- Advertisement -

Related news

error: Content is protected !!