- Advertisement -
- Advertisement -
ಕಾರ್ಗಲ್: ಇಲ್ಲಿಗೆ ಸಮೀಪದ ತಲವಾಟ ಗ್ರಾಮದ ಕೃಷಿಕ ರಮಾನಂದ ಅವರ ತೋಟದಲ್ಲಿ ಗುರುವಾರ ಕಾಣಿಸಿಕೊಂಡ ಜೋಡಿ ಕಾಳಿಂಗ ಸರ್ಪಗಳು ಮಿಲನ ಕ್ರಿಯೆಯಲ್ಲಿ ತೊಡಗಿದ್ದವು.
ಈ ದೃಶ್ಯವನ್ನು ಸೆರೆ ಹಿಡಿಯಲು ಹಲವಾರು ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದರು. ವಿಷಯ ತಿಳಿದ ಉರಗ ತಜ್ಞ ಮಾಧವ ಭಟ್ ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಕಾಳಿಂಗವನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು.
ಒಂದು ಕಾಳಿಂಗ ಸರ್ಪವನ್ನು ಹಿಡಿಯಲು ಮಾತ್ರ ಸಾಧ್ಯವಾಯಿತು. ಸೆರೆ ಹಿಡಿದ ಸರ್ಪ ಸುಮಾರು 12 ಅಡಿ ಉದ್ದವಿದ್ದು, ಹೆಣ್ಣು ಸಂತತಿ ಎಂದು ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳಾದ ನಾಗರಾಜ್, ಮಂಜಪ್ಪ ಇತರರೊಡನೆ ದಟ್ಟ ವನ ಪ್ರದೇಶದಲ್ಲಿ ಕಾಳಿಂಗ ಸರ್ಪವನ್ನು ಬಿಟ್ಟರು.
- Advertisement -