Saturday, May 18, 2024
spot_imgspot_img
spot_imgspot_img

ಕಾಸರಗೋಡು: ವಿಷ ಸೇವಿಸಿ ಎ ಎಸ್ ಐ ಆತ್ಮಹತ್ಯೆ..!

- Advertisement -G L Acharya panikkar
- Advertisement -

ಕಾಸರಗೋಡು: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಎ.ಎಸ್.ಐ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕಾಸರಗೋಡು ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಬೇಡಡ್ಕ ಠಾಣಾ ಎ ಎಸ್ ಐ ರಾಜಾಪುರ ಕೋಲಚ್ಚಿಲ್ ನ ವಿಜಯನ್ (50) ಎಂದು ಗುರುತಿಸಲಾಗಿದೆ.

ಎರ್ನಾಕುಲಂ ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನ್ ಶನಿವಾರ ಸಂಜೆ ಮೃತಪಟ್ಟರು. ಏಪ್ರಿಲ್ 29 ರಂದು ಮಧ್ಯಾಹ್ನ ಬೇಡಡ್ಕ ಪೊಲೀಸ್ ಠಾಣೆಯ ಸಮೀಪದ ವಸತಿ ಗ್ರಹದಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಜಯನ್ ರವರನ್ನು ಕಾಸರಗೋಡು ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರವಾದುದರಿಂದ ಬುಧವಾರ ಎರ್ನಾಕುಲಂ ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ರಾಜಕೀಯ ಒತ್ತಡವು ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಯುವ ಕಾಂಗ್ರೆಸ್ ಕಾರ್ಯಕರ್ತರೋರ್ವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲು ವಿಜಯನ್ ರವರ ಮೇಲೆ ಒತ್ತಡ ಕೆಲ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ಕೆಲ ಮುಖಂಡರು ಒತ್ತಡ ಹೇರಿದ್ದರು . ಇದರಿಂದ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿಬರುತ್ತಿದೆ.

- Advertisement -

Related news

error: Content is protected !!