Friday, March 29, 2024
spot_imgspot_img
spot_imgspot_img

ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಪಾಸಿಟಿವ್ ಆರೋಪಿ ಪರಾರಿ

- Advertisement -G L Acharya panikkar
- Advertisement -

ಕಾಸರಗೋಡು: ಕಾಸರಗೋಡು (ಸೆ.30) ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಪಾಸಿಟಿವ್ ಆರೋಪಿ ನಿಗಾ ಕೇಂದ್ರದಿಂದಲೇ ಪರಾರಿಯಾದ ಘಟನೆ ಸೆ.29ರಂದು ರಾತ್ರಿ ನಡೆದಿದೆ.

ಉಪ್ಪಳ ಕೈಕಂಬದ ಆದಂ ಖಾನ್ ( 24) ಪರಾರಿಯಾದ ಆರೋಪಿ. ಕಾಸರಗೋಡಿನ ಪಡನ್ನಕ್ಕಾಡ್ ನಲ್ಲಿರುವ ಕೋವಿಡ್ ನಿಗಾ ಕೇಂದ್ರದಿಂದ ಆರೋಪಿ ಕಿಟಿಕಿ ಮುರಿದು ಪರಾರಿಯಾಗಿದ್ದಾನೆ. ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳದ ಮುಸ್ತಫಾ ಎಂಬವರ ಕೊಲೆ ಯತ್ನ ಪ್ರಕರಣದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಲೆಮರೆಸಿಕೊಂಡಿದ್ದ ಆದಂ ಖಾನ್ ಹಾಗೂ ಈತನ ಸಹಚರ ನೌಶಾದ್ ನನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಯನ್ನು ನ್ಯಾಯಾಲಯದ ಪ್ರಕ್ರಿಯೆ ಬಳಿಕ ಕೋವಿಡ್ ನಿಗಾ ಕೇಂದ್ರದಲ್ಲಿರಿಸಲಾಗಿತ್ತು. ಈ ನಡುವೆ ಪರಾರಿಯಾಗಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

- Advertisement -

Related news

error: Content is protected !!