





ಕಾಸರಗೋಡು: ವಯನಾಡಿನಲ್ಲಿ 71 ವರ್ಷದ ವೃದ್ಧೆಯು ಬೊಲೆರೋ ಜೀಪು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ತಿರುವು ಪಡೆದುಕೊಂಡಿದ್ದು , ಕಾಸರಗೋಡಿನ ಐದು ಮಂದಿಯನ್ನು ಬಂಧಿಸಲಾಗಿದೆ.
ನೆಲ್ಲಿಮುಂಡಂ ಕಳಪ್ಪುರದ ಇಬ್ರಾಹಿಂ ರವರ ಪತ್ನಿ ಬೀಫಾತಿಮ್ಮ ರವರಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ವಯನಾಡು ಮೇಪಾಡಿ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪೆರುಂಬಳದ ಅಖಿಲ್ (28), ಆರಾಮಂಗಾನದ ಪ್ರಶಾಂತ್ (21), ಪೆರುಂಬಳ ದ ನಿಧಿ ನಾರಾಯಣನ್ (20) ಮತ್ತು ಪೆರುಂಬಳ ಚಾವಕ್ಕಾಡ್ ನ ನಿತಿನ್ (22) ಹಾಗೂ ೧೭ ವರ್ಷದ ಬಾಲಕ ಎಂದು ಗುರುತಿಸಲಾಗಿದೆ.
ಜೂನ್ ೮ ರಂದು ಘಟನೆ ನಡೆದಿತ್ತು. ಬೆಳಿಗ್ಗೆ 11 ಗಂಟೆಗೆ ಘಟನೆ ನಡೆದಿತ್ತು. ಮೊಮ್ಮಗನ ಜೊತೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ಮೇಪಾಡಿ ಸಮೀಪ ಸೈಡ್ ನೀಡುವ ಬಗ್ಗೆ ಆರೋಪಿಗಳು ಸ್ಕೂಟರ್ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಅಲ್ಲಿಂದ ಪ್ರಯಾಣ ಬೆಳೆಸಿದ್ದಾರೆ. ಅಲ್ಪ ದೂರ ತಲಪುತ್ತಿದ್ದಂತೆ ಜೀಪು ಸ್ಕೂಟರ್ ಗೆ ಡಿಕ್ಕಿ ಹೊಡೆಸಿದ್ದು, , ರಸ್ತೆ ಗೆಸೆಯಲ್ಪಟ್ಟ ಬೀಫಾತಿಮ್ಮ ಮೃತಪಟ್ಟಿದ್ದು, ಮೊಮ್ಮಗ ಆಫ್ನಾನ್ ಗಂಭೀರ ಗಾಯಗೊಂಡಿದ್ದರು.
ಆರಂಭದಲ್ಲಿ ಪೊಲೀಸರು ಅಸಹಜ ಪ್ರಕರಣ ದಾಖಲಿಸಿ ಕೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅಫ್ನಾನ್ ನಿಂದ ಹೇಳಿಕೆ ಪಡೆದಾಗ ಕೃತ್ಯ ಬೆಳಕಿಗೆ ಬಂದಿದೆ.ತನಿಖೆ ನಡೆಸಿದ ಪೊಲೀಸರು ಬೊಲೆರೋ ಜೀಪು ಚಲಾಯಿಸುತ್ತಿದ್ದ ಅಖಿಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ಅಪಘಾತವಲ್ಲ ಎಂದು ಬೆಳಕಿಗೆ ಬಂದಿದೆ.
ಸಿ ಸಿ ಟಿ ವಿ ದೃಶ್ಯ ಗಳನ್ನು ಹಾಗೂ ಕೆಲ ವಾಹನ ಚಾಲಕರಿಂದ ಮಾಹಿತಿ ಕಲೆ ಹಾಕಿದ ಪೊಲೀಸರು ಕೊಲೆ ಎಂಬುದು ದೃಡ ಗೊಂಡಿದ್ದು, ಇದರಿಂದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೀಪು ಸ್ಕೂಟರನ್ನು ಹಿಂಬಾಲಿಸಿ ಕೊಂಡು ಹೋಗಿರುವುದನ್ನು ಪ್ರತ್ಯಕ್ಷ ದ ರ್ಶಿ ಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ