Friday, June 19, 2026
spot_imgspot_img
spot_imgspot_img

ಕಾಸರಗೋಡು: ಬಾವಿ ಕೆಲಸದ ವೇಳೆ ಮಣ್ಣು ಜರಿದು ಬಿದ್ದು ಕಾರ್ಮಿಕ ಮೃತ್ಯು..!

- Advertisement -
- Advertisement -

ಕಾಸರಗೋಡು: ಬಾವಿ ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಜರಿದು ಬಿದ್ದು ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಚೆಂಬರಿಕದಲ್ಲಿ ನಡೆದಿದೆ. ಜತೆಗಿದ್ದ ಇನ್ನೊರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾರೆ.

ಮೃತಪಟ್ಟ ಕಾರ್ಮಿಕನನ್ನು ಚೆಂಬರಿಕ ನಿವಾಸಿ ಮುಹಮ್ಮದ್ ಹಾರಿಸ್(41) ಎಂದು ಗುರುತಿಸಲಾಗಿದೆ.

ಇವರ ಜತೆಗಿದ್ದ ಕಾರ್ಮಿಕ ಪ್ರದೀಪ್ ಗಂಭೀರ ಗಾಯಗೊಂಡಿದ್ದು ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಮುಹಮ್ಮದ್ ಹಾರೀಸ್‌ರ ಸಹೋದರ ಮುಹಮ್ಮದ್ ಕುಂಞ ಅಪಾಯದಿಂದ ಪಾರಾಗಿದ್ದಾರೆ. ಚೆಂಬರಿಕಾದಲ್ಲಿ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಬಾವಿ ತೋಡುತ್ತಿದ್ದಂತೆಯೇ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ನಾಗರಿಕರು ಇಬ್ಬರನ್ನು ಮೇಲೆತ್ತಿ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮುಹಮ್ಮದ್ ಹಾರಿಸ್ ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!