Saturday, June 28, 2025
spot_imgspot_img
spot_imgspot_img

ಹೃದಯಾಘಾತದಿಂದ ಯುವಕ ಮೃತ್ಯು

- Advertisement -
- Advertisement -

ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ.

ಗಾಂಧಿನಗರ ಆಶ್ರಯ ಕಾಲೋನಿ ನಿವಾಸಿ ಅಸ್ಲಾಂ ಕಾಸೀಂ ಸಾಬ್ ಶೇಖ (23) ಮೃತ ಯುವಕನಾಗಿದ್ದಾನೆ. ಕಾಸೀಂನು ಜೆ.ಸಿ.ಬಿ. ಆಪರೇಟರ್ ವೃತ್ತಿಯನ್ನು ಮಾಡುತ್ತಿದ್ದು, ಬೆಳಿಗ್ಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಕೂಡಲೇ ಆತನನ್ನು ನಗರದದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರು.

ಅಷ್ಟರಲ್ಲಿ ಆವರು ಕೊನೆಯುಸಿರೆಳೆದಿದ್ದಾರೆ. ಮೃತ ಯುವಕ 8 ವರ್ಷ ಇರುವಾಗಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಮಾವನ ಮನೆಯಲ್ಲಿ ವಾಸವಿದ್ದರು. ಇದೀಗ ಅವರು ಅತ್ತೆ, ಮಾವ, ಓರ್ವ ಸಹೋದರ, ಓರ್ವ ಸಹೋದರಿ ಸೇರಿದಂತೆ ಸಬಂಧಿಕರನ್ನು ಅಗಲಿದ್ದಾರೆ.

- Advertisement -

Related news

error: Content is protected !!