Tuesday, April 22, 2025
spot_imgspot_img
spot_imgspot_img

ಕಟ್ಟೆಮಾರ್‌: (ಜೂ.9) ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ಬೃಹತ್‌ ಉಚಿತ ದಂತ ಮತ್ತು ವೈದ್ಯಕೀಯ ಶಿಬಿರ

- Advertisement -
- Advertisement -

ಕಟ್ಟೆಮಾರ್‌: ಶ್ರೀ ಮೋಹನ್‌ರಾಜ್‌ ಚೌಟ. ಪುಂಚೋಳಿ ಮಾರುಗುತ್ತು ಇವರ ಶುಭ ಆಶೀರ್ವಾದ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ಶ್ರೀ ಮಂತ್ರದೇವತಾ ಜನ ಸೇವಾ ಟ್ರಸ್ಟ್ ಕಟ್ಟೆಮಾರ್‌ ಮತ್ತು ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ದ.ಕ. ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಇವರ ಸಹಯೋಗದೊಂದಿಗೆ ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಮತ್ತು ಯೆನಪೋಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆ ದೇರಳಕಟ್ಟೆ ಇವರ ನೇತೃತ್ವದಲ್ಲಿ ಬೃಹತ್‌ ಉಚಿತ ದಂತ ಮತ್ತು ವೈದ್ಯಕೀಯ ಶಿಬಿರವು 9ನೇ ಭಾನುವಾರ 9:30ಕ್ಕೆ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರ್‌ ಇಲ್ಲಿ ನಡೆಯಲಿದೆ.

ಸಾಮಾನ್ಯ ರೋಗಿಗಳ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಕಣ್ಣಿನ ರೋಗ ತಜ್ಞರು, ದಂತ ಚಿಕಿತ್ಸಾ ತಜ್ಞರು ಭಾಗವಹಿಸಲಿದ್ದಾರೆ.

ಶಿಬಿರದ ವಿಶೇಷತೆಗಳು:

  • ಯೇನಪೋಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಹೆಲ್ತ್‌‌‌ಕಾರ್ಡ್ ಮಾಡಿಸುವ ಅವಕಾಶವಿದೆ.
  • ಹುಳುಕುನ ಹಲ್ಲುಗಳಿಗೆ ಸಿಮೆಂಟ್ಟ್ ಬೆಳ್ಳಿ ತುಂಬಿಸುವುದು.
  • ಹಲ್ಲುಗಳ ಸ್ವಚ್ಛತೆ.
  • ಹಲ್ಲುಗಳನ್ನು ಕೀಳಿಸುವುದು.
  • ಉಚಿತ ಔಷಧಿಗಳು ಮತ್ತು ಉಚಿತ ಚಿಕಿತ್ಸೆ ನೀಡಲಾಗುವುದು.
- Advertisement -

Related news

error: Content is protected !!