Sunday, June 29, 2025
spot_imgspot_img
spot_imgspot_img

ಕೆಲಿಂಜ: ವಿಟಿವಿ ವರದಿ ಫಲಶ್ರುತಿ..! ಹೈಪವರ್‌ ವಿದ್ಯುತ್‌ ತಂತಿಗೆ ಸುತ್ತಿಕೊಂಡ ಮರದ ಬಳ್ಳಿಗಳ ತೆರವು..!

- Advertisement -
- Advertisement -

ಮೆಸ್ಕಾಂ ಅಧಿಕಾರಿಗಳಿಗೆ ಸ್ಥಳೀಯರಿಂದ ಕೃತಜ್ಞತೆ ಸಲ್ಲಿಕೆ..!

ಕೆಲಿಂಜ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕೆಲಿಂಜ, ಕಲ್ಮಲೆ ಎಂಬಲ್ಲಿ ಹೈಪವರ್‌ ವಿದ್ಯುತ್‌ ತಂತಿಗೆ ಮರದ ಬಳ್ಳಿಗಳು ಸುತ್ತಿಕೊಂಡು ಅಪಾಯದಲ್ಲಿ ಸಿಲುಕಿರುವ ದೃಶ್ಯ ಬೆಳಕಿಗೆ ಬಂದಿದೆ. ಇದರಿಂದ ಕಲ್ಮಲೆ ಪರಿಸರದ ನಾಗರಿಕರು ಜೋರಾಗಿ ಬೀಸುವ ಗಾಳಿ ಮಳೆಗೆ ಭಯಭೀತರಾಗಿ ದಿನ ಕಳೆಯುವ ಸ್ಥಿತಿ ಎದುರಾಗಿದೆ, ಈ ಬಗ್ಗೆ ಮಸ್ಕಾಂ ಮತ್ತು ಅರಣ್ಯ ಇಲಾಖೆ ಗಮನ ಹರಿಸಿ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಕಲ್ಮಲೆ ನಾರಗರಿಕ ಮನವಿಯನ್ನು ವಿಟಿವಿ ಮಾಧ್ಯಮದಲ್ಲಿ ವರದಿ ಭಿತ್ತರಿಸಲಾಗಿತ್ತು.

ಇದೀಗ ಮೆಸ್ಕಾಂ ಅಧಿಕಾರಿಗಳು ವಿಟಿವಿ ವರದಿಗೆ ಸ್ಪಂದಿಸಿದ್ದು, ಹೈಪವರ್‌ ವಿದ್ಯುತ್‌ ತಂತಿಗೆ ಸುತ್ತಿಕೊಂಡ ಮರದ ಬಳ್ಳಿಯನ್ನು ತೆರವು ಗೊಳಿಸಿದ್ದಾರೆ. ಇದರಿಂದ ಕಲ್ಮಲೆ ಪರಿಸರದ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ. ಮೆಸ್ಕಾಂ ಅಧಿಕಾರಿಗಳ ಶೀಫ್ರ ಕಾರ್ಯ ವೈಖರಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!