



ಕೇಪು: ಬಂಟರ ಸಂಘ ಕೇಪು (ರಿ )ಇದರ ವತಿಯಿಂದ ಕೇಪು ಗ್ರಾಮದ ಸ್ವಜಾತಿ ಮಕ್ಕಳಿಗೆ ಕೇಪು ಕಲ್ಲಂಗಲ ಗುತ್ತು ತರವಾಡು ಮನೆಯಲ್ಲಿ ಮಕರ ಸಂಕ್ರಮಣದ ಈ ಶುಭದಿನದಂದು ಭಜನಾ ತರಬೇತಿ ಶಿಬಿರಕ್ಕೆ ದೀಪ ಬೆಳಗಿಸಿ ಚಾಲನೆ ನೀಡಲಾಯಿತು.


ಕಾರ್ಯಕ್ರಮದಲ್ಲಿ ವಿಟ್ಲ ವಲಯದ ಗೌರವಾಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಲಯ ಅಧ್ಯಕ್ಷ ರಾದ ರಾಜೀವ ಭಂಡಾರಿ ಕುಂಡ ಕೋಳಿ ಕೇಪು ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಕರ ಶೆಟ್ಟಿ ಪಡಿಬಾಗಿಲು ಬಾಲಕೃಷ್ಣ ಶೆಟ್ಟಿ ಬೇಗ್ರೋಡಿ ಸುರೇಶ್ ಶೆಟ್ಟಿ ಪಡಿಬಾಗಿಲು ಕೊರಗಪ್ಪ ಶೆಟ್ಟಿ ಕಲ್ಲಂಗಳ ಗುತ್ತು ಜಗಜೀವನ್ ರಾಮ್ ಶೆಟ್ಟಿ ಮೈರಾ ಪ್ರವೀಣ್ ಶೆಟ್ಟಿ ಮೈರಾ ಅಧ್ಯಕ್ಷರು ಯುವ ಒಂಟರ ಸಂಘ ಸರಿತಾ ಬಿ ಶೆಟ್ಟಿ ಮಹಿಳಾ ಒಂಟರ ಸಂಘ ಸುರೇಶ್ ಶೆಟ್ಟಿ ಮೈರಾ ಜತ್ತಪ್ಪ ಶೆಟ್ಟಿ ಕಲ್ಲಂಗಲ ವಸಂತಿ ಶೆಟ್ಟಿ ಕಲ್ಲಂಗಲ,ಇವರುಗಳು ಭಾಗವಹಿಸಿ ಶುಭ ಹಾರೈಸಿದರು.ಭಜನಾ ತರಬೇತುದಾರರಾಗಿ ಸಂದೀಪ್ ರೈ ಕಲ್ಲಂಗಲ ಮತ್ತು ಪ್ರಸಕ್ತ ರೈ ಹಾಜರಿದ್ದು ಸಂಕೀರ್ತನೆ ಹಾಡಿ ಭಜನೆಗೆ ಚಾಲನೆ ನೀಡಿದರು 12 ಜನ ಮಕ್ಕಳು ತರಬೇತಿಗಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷರಾದ ತಾರಾನಾಥ ಆಳ್ವ ಕುಕ್ಕೆಬೆಟ್ಟು ಮತ್ತು ಕಾರ್ಯದರ್ಶಿಯಾದ ಸತೀಶ್ ರೈ ಮೈರ ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.ಮುಂದಿನ ತರಬೇತಿ ದಿನ 18 /1/ 20 26ನೇ ಆದಿತ್ಯವಾರ ಬೆಳಿಗ್ಗೆ ಗಂಟೆ ಒಂಬತ್ತರಿಂದ ಹನ್ನೊಂದರವರೆಗೆ ಎಂದು ತಿಳಿಸಲಾಯಿತು.








