12 ವರ್ಷದ ಬಾಲಕ ಕೇರಳದ ಮುಖ್ಯಮಂತ್ರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಕೇರಳದ ತಿರುವನಂತಪುರಂದಲ್ಲಿ ನಡೆದಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಪೊಲೀಸ್ ಪ್ರಧಾನ ಕಛೇರಿಯ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು ಕರೆಯಲ್ಲಿ ಮಾತನಾಡಿದ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾನೆ. ಆ ಕೂಡಲೇ ಸಿಬಂದಿಗಳು ಮುಖ್ಯಮಂತ್ರಿ ನಿವಾಸ ಹಾಗೂ ಕಚೇರಿಯ ಸುತ್ತಮುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು.
ತಕ್ಷಣವೇ ವಿಳಾಸವನ್ನು ಪತ್ತೆ ಹಚ್ಚಿ ಪರಿಶಿಲಿಸಿದಾಗ 12 ವರ್ಷದ ಬಾಲಕ, ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದು ಈ ಕುರಿತು ಬಾಲಕನ ಪೋಷಕರಲ್ಲಿ ಮಾತನಾಡಿದಾಗ ಆತ ಫೋನ್ನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಿಯಂತ್ರಣ ಕೊಠಡಿಗೆ ಕರೆ ಹೋಗಿದೆ. ನಿಯಂತ್ರಣ ಕೊಠಡಿಯ ಅಧಿಕಾರಿಗಳು ಬಾಲಕನ ಕರೆಯನ್ನು ತಪ್ಪಾಗಿ ಗ್ರಹಿಸಿ ಬೆದರಿಕೆ ಹಾಕುವ ಉದ್ದೇಶದಿಂದ ಕರೆ ಮಾಡಲಾಗಿದೆ ಎಂದು ಗ್ರಹಿಸಿ ಹೆಚ್ಚಿನ ಬಂದೊಬಸ್ತ್ ಏರ್ಪಡಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಕೆ ನಡೆಸಿದ್ದಾರೆ.