Wednesday, May 1, 2024
spot_imgspot_img
spot_imgspot_img

ಕೇರಳ: ಕೌಟುಂಬಿಕ ಕಲಹ; ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣು..!

- Advertisement -G L Acharya panikkar
- Advertisement -

ಕೇರಳ: ತನ್ನಿಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕೊಲ್ಲಂ ಪಟ್ಟಣಂ ಚೆಂಬಕಶ್ಸೆರಿಯ ಜವಾಹರನಗರದಲ್ಲಿನ ನಿವಾಸದಲ್ಲಿ ಜೋಸ್ ಪ್ರಮೋದ್ (41), ಮಗ ದೇವನಾರಾಯಣನ್ (9) ಮತ್ತು ಪುತ್ರಿ ದೇವಾನಂದ (4) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಮೋದ್ ತನ್ನ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಘಟನೆ ವೇಳೆ ಮನೆಯಲ್ಲಿ ಜೋಸ್ ಪ್ರಮೋದ್ ಮತ್ತು ಅವರ ಮಕ್ಕಳು ಮಾತ್ರ ಇದ್ದರು ಎನ್ನಲಾಗಿದೆ. ಪ್ರಮೋದ್ ಪತ್ನಿ ಲಕ್ಷ್ಮಿ ವೈದ್ಯೆಯಾಗಿದ್ದು, ಪಿಜಿ ಓದುತ್ತಿದ್ದಾರೆ.ಪ್ರಮೋದ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾತ್ರಿ ವೇಳೆಗೆ ಸಹೋದರ ಹಾಗೂ ಪತ್ನಿಗೆ ದೂರವಾಣಿ ಮೂಲಕ ಸಂದೇಶ ರವಾನಿಸಿದ್ದಾರೆ. ಬೆಳಗ್ಗೆ ಮೇಸೇಜ್ ಗಮನಿಸಿ ಸಂಬಂಧಿಕರು ಮನೆ ಬಳಿ ಬಂದಾಗ ಈ ವಿಚಾರ ಬೆಳೆಕಿಗೆ ಬಂದಿದೆ.

ಎರಡು ತಿಂಗಳಿಂದ ಪತ್ನಿ ಡಾ.ಲಕ್ಷ್ಮಿ ಮನೆಗೆ ಬರುತ್ತಿಲ್ಲ ಎಂದು ಜೋಸ್ ಪ್ರಮೋದ್ ಇತ್ತೀಚೆಗೆ ಸಂಬಂಧಿಕರಿಗೆ ಹೇಳಿಕೊಂಡು ಬೇಸರ ಮಾಡಿಕೊಂಡಿದ್ದರು ಎನ್ನಲಾಗಿದೆ. ಆಟೋರಿಕ್ಷಾ ಚಾಲಕರಾಗಿದ್ದ ಜೋಸ್ ಪ್ರಮೋದ್ ಮತ್ತು ಲಕ್ಷ್ಮಿ ಪ್ರೇಮ ವಿವಾಹವಾಗಿದ್ದರು. ಪ್ರಮೋದ್ ಜೋಸ್ ಮತ್ತು ಲಕ್ಷ್ಮಿ ಒಂಬತ್ತನೇ ತರಗತಿಯಿಂದ ಡೇಟಿಂಗ್ ನಲ್ಲಿದ್ದು ವಿವಾಹವಾಗಿದ್ದರು. ಆಟೋ ಡ್ರೈವರ್ ಆಗಿದ್ದ ಪ್ರಮೋದ್ ನಂತರ ವಿದೇಶಕ್ಕೆ ತೆರಳಿದ್ದರು. ಬಳಿಕ ಹಿಂತಿರುಗಿದ ಅವರು ಸುಮಾರು ಎಂಟು ವರ್ಷಗಳಿಂದ ಕೆಲಸಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ.

ನಿತ್ಯ ಕುಡಿತದ ವ್ಯಸನಿಯಾಗಿದ್ದ ಪ್ರಮೋದ್ ಹಾಗೂ ಪತ್ನಿ ನಡುವೆ ಜಗಳ ನಡೆಯುತ್ತಿದ್ದು, ಲಕ್ಷ್ಮಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬೇರೆಡೆಗೆ ತೆರಳಿದ ಬಳಿಕ ಕುಟುಂಬದಿಂದ ದೂರವಾಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಸಂಸಾರದಲ್ಲಿ ಕಳೆದ ಏಳು ವರ್ಷಗಳಿಂದ ಕೌಟುಂಬಿಕ ಕಲಹ ಉಂಟಾಗಿದ್ದು, ಹಲವು ಬಾರಿ ಕುಟುಂಬಸ್ಥರು ಮದ್ಯಸ್ಥಿಕೆ ಮಾಡಿದ್ದರು್ ಎಂದು ವರದಿಯಾಗಿದೆ.

- Advertisement -

Related news

error: Content is protected !!