- Advertisement -
- Advertisement -
ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಗೆ ಇಂದು 47ನೇ ಹುಟ್ಟು ಹಬ್ಬದ ಸಂಭ್ರಮ. ಹುಟ್ಟುಹಬ್ಬದ ದಿನವೇ ನಟ ಸುದೀಪ್ ಅವರ ಬಹುದಿನಗಳ ಕನಸು ನನಸಾಗಿದೆ. ಕಿಚ್ಚನ ಶಾಂತಿ ನಿವಾಸದ ಕನಸಿಗೆ ಇಂದು ಚಾಲನೆ ಸಿಕ್ಕಿದೆ.
ವೃದ್ಧರಿಗಾಗಿ ಆಶ್ರಮ ಮಾಡಬೇಕು ಅನ್ನೋದು ಸುದೀಪ್ ಅವರ ಬಹುದಿನಗಳ ಕನಸಾಗಿತ್ತು. ಹೀಗಾಗಿ ಬೆಂಗಳೂರಿನ ಎಲೆಕೊಡಿ ಹಳ್ಳಿಯಲ್ಲಿ ಶಾಂತಿ ನಿವಾಸಕ್ಕೆ ಇಂದು ಗುದ್ದಲಿ ಪೂಜೆ ನಡೆಯಿತು. ಸುದೀಪ್ ಅನುಪಸ್ಥಿತಿಯಲ್ಲಿ ಅವರ ಪತ್ನಿ ಪ್ರಿಯಾ ಸುದೀಪ್ ಗುದ್ದಲಿ ಪೂಜೆ ನೆರವೇರಿಸಿದರು.
- Advertisement -