Thursday, May 2, 2024
spot_imgspot_img
spot_imgspot_img

ಜ್ಯೋತಿಷಿಯ ಪುತ್ರನನ್ನು ಸಿನಿಮೀಯ ರೀತಿಯಲ್ಲಿಕಿಡ್ನಾಪ್ ಮಾಡಿದ ಯುವಕ ; ಆರೋಪಿ ಬಂಧನ

- Advertisement -G L Acharya panikkar
- Advertisement -

ಜ್ಯೋತಿಷಿಯ 18 ವರ್ಷದ ಪುತ್ರನನ್ನು ಕಿಡ್ನಾಪ್​ ಮಾಡಿದ ಘಟನೆ ಆಗಸ್ಟ್​ 4ರಂದು ಬೆಂಗಳೂರಿನಲ್ಲಿ ನಡೆದಿದ್ದು  ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿ ಅರ್ಜುನ್ ನನ್ನು ಬಂಧಿಸಿದ್ದಾರೆ.

ಬಂಧಿತ ಯುವಕ ಅರ್ಜುನ್​​ ಮೂಲತಃ ತುಮಾಕೂರಿನವನು.  ಬೆಂಗಳೂರಿನಲ್ಲಿ ಪಿಜಿಯಲ್ಲಿ ವಾಸಿಸುತ್ತಿದ್ದು,  ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಿನಿಮಾ ನೋಡುತಿದ್ದ ಅರ್ಜುನ್​ನಿಂದ ಜ್ಯೋತಿಷಿ ಪುತ್ರನನ್ನು ಕಿಡ್ನಾಪ್​ ಮಾಡುವ ಖತರ್ನಾಕ ಯೋಚನೆ ಬಂದಿದೆ.
ಜ್ಯೋತಿಷಿ ಮಗ ಮೆಡಿಕಲ್ ಸೀಟ್​ಗಾಗಿ ಕೋಚಿಂಗ್​ಗೆ ತೆರಳುತ್ತಿದ್ದ. ತಮ್ಮದೇ ಕಾರ್​ನಲ್ಲಿ ಕೋಚಿಂಗ್ ತೆರಳುತ್ತಿದ್ದು, ಡ್ರಾಪ್ ಕೇಳುವ ನೆಪದಲ್ಲಿ, ಗನ್ ಹಣೆಗಿಟ್ಟು ಗಾಡಿ ಹೇಳಿದ ಕಡೆ ಹೊಗುವಂತೆ ಸೂಚಿಸಿ ಕಿಡ್ನಾಪ್​ ಮಾಡಿ ಬಳಿಕ ಜ್ಯೋತಿಷಿ ಹಾಗೂ ಅವರ ಪತ್ನಿಗೆ ವಾಟ್ಸ್​​ ಆ್ಯಪ್ ವಿಡಿಯೋ ಕಾಲ್​ ಮಾಡಿ,​ 5 ಲಕ್ಷ ರೂ. ಡಿಮ್ಯಾಂಡ್​ ಮಾಡಿದ್ದಾನೆ.
ಬಳಿಕ ಚಿನ್ನ ನೀಡುವುದಾಗಿ ಹೇಳಿ ಜ್ಯೋತಿಷಿ ಪತ್ನಿ ಮನೆಯಿಂದ ಹೊರಟಿದ್ದಾರೆ. ಮತ್ತೊಂದೆಡೆ ಮಗ ಕಿಡ್ನಾಪ್ ಆದ ಬಗ್ಗೆ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಕಿಡ್ನಾಪ್​ ಪ್ರಕರಣವನ್ನು ಹೆಚ್​ಎಸ್​ ಆರ್​ ಲೇಔಟ್ ಪೊಲೀಸರು ಭೇದಿಸಿದ್ದು, ಅರ್ಜುನ್ (19) ಎಂಬಾತನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!