Thursday, March 28, 2024
spot_imgspot_img
spot_imgspot_img

ಮಾಜಿ ಮೇಯರ್​ ಸಂಪತ್​ ರಾಜ್ ಗೆ ನ.24 ರವರೆಗೆ ನ್ಯಾಯಾಂಗ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಮೇಲೆ ನಡೆದ ದಾಳಿ ಪ್ರಕರಣ ಸಂಬಂಧ ಅರೆಸ್ಟ್​ ಆಗಿರುವ ಮಾಜಿ ಮೇಯರ್​ ಸಂಪತ್​ ರಾಜ್​ರನ್ನ​ ನ್ಯಾಯಾಲಯ ಇಂದಿನಿಂದ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಪ್ರಕರಣದಲ್ಲಿ 51ನೇ ಆರೋಪಿಯಾಗಿರುವ ಸಂಪತ್​ ರಾಜ್ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದರು. ಕಳೆದ ಮಂಗಳವಾರಂದು ಸಿಸಿಬಿ ಕೊನೆಗೂ ಅವರನ್ನ ಬಂಧಿಸಿ ಪೊಲೀಸ್​ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿತ್ತು.

ಕಸ್ಟಡಿ ಅವಧಿ ಇಂದು ಅಂತ್ಯವಾದ ಹಿನ್ನೆಲೆ ಮಧ್ಯಾಹ್ನ ಸಂಪತ್​ರನ್ನ 67ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಈ ವೇಳೆ ಕೋರ್ಟ್ ಸಂಪತ್​ ರಾಜ್​ರನ್ನ ನವೆಂಬರ್ 24ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.

- Advertisement -

Related news

error: Content is protected !!