Sunday, April 28, 2024
spot_imgspot_img
spot_imgspot_img

ಪುತ್ತೂರು: ಕುದ್ಕಾಡಿ ಗುರುಪ್ರಸಾದ್‌ ರೈ ನಿಧನ : ದಕ್ಷಿಣ ಕನ್ನಡ ಜಿಲ್ಲೆಯನ್ನೇ ಸಂಚಲನ ಮೂಡಿಸಿದ ಕುದ್ಕಾಡಿ ಮನೆ ದರೋಡೆಯ ಮನೆ ಯಜಮಾನ ಗುರುಪ್ರಸಾದ್ ರೈ

- Advertisement -G L Acharya panikkar
- Advertisement -
This image has an empty alt attribute; its file name is baby-sitting-new-853x1024.jpeg

ಪುತ್ತೂರು: ಬಡಗನ್ನೂರು ಗ್ರಾಮದ ಕುದ್ಕಾಡಿ ಗುರುಪ್ರಸಾದ್ ರೈ ಇವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಇವರು ಬಡಗನ್ನೂರು ಗ್ರಾಮ ಪಂಚಾಯತ್‌ ಮಾಜಿ ಸದಸ್ಯರಾಗಿರುತ್ತಾರೆ. ಶಾಸಕ ಅಶೋಕ್‌ ರೈ ಯವರ ಆಪ್ತರು ಆಗಿದ್ದ ಇವರು ಪರೋಪಕಾರಿ, ಬಹಳ ಸ್ನೇಹಜೀವಿಯಾಗಿದ್ದರು. ಅಲ್ಪ ಕಾಲದ ಅನಾರೋಗ್ಯದಿಂದಾಗಿ ನಿನ್ನೆ ರಾತ್ರಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಬೆಳಿಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಗುರುಪ್ರಸಾದ್ ರೈ ಅವರ ಮನೆಯಲ್ಲಿ ಸೆ. 9ರಂದು ದರೋಡೆ ಪ್ರಕರಣವೊಂದು ನಡೆದಿದ್ದು ಕರಾವಳಿ ಜನರು ಬೆಚ್ಚಿಬೀಳಿಸುವಂತಾಗಿತ್ತು. ಪ್ರಕರಣವನ್ನು ತಿಂಗಳೊಳಗೆ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತರು ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!