- Advertisement -
- Advertisement -



ಕುಂದಾಪುರ: ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ವಾಣಿಜ್ಯ ಸರಕು ತುಂಬಿದ ಲಾರಿಯೊಂದು ಬ್ಯಾರಿಕೇಡ್ ತಪ್ಪಿಸಲು ಹೋಗಿ ಡಿವೈಡರ್ ಮೇಲೇರಿದ ಘಟನೆ ಹೆದ್ದಾರಿ 66ರಲ್ಲಿ ನಡೆದಿದೆ. ಡಿವೈಡರ್ ಢಿಕ್ಕಿಯಾದ ಪರಿಣಾಮ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ.
ಬ್ಯಾರಿಕೇಡ್ ಅಳವಡಿಕೆಯಿಂದ ಉಪಯೋಗ ಆಗುವುದಕ್ಕಿಂತ ತೊಂದರೆಗಳಾಗುವುದು ಹೆಚ್ಚಾಗಿದೆ. ಮತ್ತು ರಾತ್ರಿ ವೇಳೆ ಬ್ಯಾರಿಕೇಡ್ ತೆರವುಗೊಳಿಸದೆ ಅಪಘಾತಗಳು ಇರುವುದರಿಂದ ಸಂಭವಿಸುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ರಾತ್ರಿ ವೇಳೆ ಬ್ಯಾರಿಕೇಡ್ ತೆರವುಗೊಳಿಸಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
- Advertisement -