Friday, June 27, 2025
spot_imgspot_img
spot_imgspot_img

ಜೈಸ್ ಹೆ ಮಹಮ್ಮದ್ ಉಗ್ರ ಸಂಘಟನೆಯಿಂದ ಹಿಂದು ಜಾಗರಣ ವೇದಿಕೆಯ ಪ್ರಮುಖರಿಗೆ ಉರ್ದುವಿನಲ್ಲಿ ಜೀವ ಬೆದರಿಕೆ; ಪೋಲೀಸ್ ಠಾಣೆಗೆ ದೂರು

- Advertisement -
- Advertisement -

ಜೈಸ್ ಹೆ ಮಹಮ್ಮದ್ ಉಗ್ರ ಸಂಘಟನೆಯಿಂದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿಗೆ ಹಾಗೂ ರಕ್ಷಿತ್ ಬುಡೋಳಿಗೆ ಜೀವ ಬೆದರಿಕೆ ನೀಡಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸಂಘದ ತಾಲೂಕು ಕಾರ್ಯವಾಹ ರಕ್ಷಿತ್ ಬುಡೊಲಿ ಯವರ ವಾಟ್ಸಪ್ ಗೆ ಪಾಕಿಸ್ತಾನ, ಅಫ್ಘಾನಿಸ್ಥಾನ, ಸೌದಿ ಅರೇಬಿಯ ದೇಶದ 3 ಮೊಬೈಲ್ ಸಂಖ್ಯೆಯಿಂದ ಮೆಸ್ಸೇಜ್ ಮತ್ತು ವಾಯ್ಸ್ ರೆಕಾರ್ಡ್ ಮಾಡಿ ಬೆದರಿಕೆ ಹಾಕಿದ್ದಾರೆ.”ಈ ಮುಸ್ಲಿಮ್ ಸಹೋದರನ ಕೊಲೆಯಲ್ಲಿ ಭಾಗಿಯಾಗಿರುವ ರಾಕೇಶ್ ಬುಡೋಳಿ, ನಿಮ್ಮ ಸಹಚರ ನರಸಿಂಹ ಮಾಣಿ ಹಾಗೂ ಇತರ ಎಲ್ಲ ಹೆಸರುಗಳು ನಮ್ಮ ಪಟ್ಟಿಗೆ ಸೇರಿಸಲಾಗಿದೆ. ನಾವು ದೂರವಿಲ್ಲ ನಾವು ನಿಮ್ಮ ಮನೆ ತಲುಪಿದ್ದೇವೆ. ಈಗ ನರಸಿಂಹನ ಕ್ಷಣಗಣನೆ ಆರಂಭವಾಗಿದೆ. ಸತ್ತ ಸುಹಾಶ್ ಶೆಟ್ಟಿ ಅವನಂತೆ ನಿಮ್ಮಿಬ್ಬರನ್ನು ನಾವು ಕೊಲ್ಲುತ್ತೇವೆ. ಜೈಶ್-ಎ-ಮೊಹಮ್ಮದ್‌ನ ಮುಜಾಹಿದ್ದೀನ್ ನವದೆಹಲಿಯನ್ನು ತಲುಪಿದ್ದೇವೆ. ನಾವು ಹೊಸದಿಲ್ಲಿಯಲ್ಲಿದ್ದೇವೆ” ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ.ಈ ಬೆದರಿಕೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆಯ ಉಲ್ಲೇಖ ಮಾಡಲಾಗಿದೆ, ಮತ್ತು ಬಂಟ್ವಾಳದ ಕಾರ್ಯಕರ್ತನ ಮೊಬೈಲ್ ಸಂಖ್ಯೆ ಉಗ್ರರ ಕೈಗೆ ತಲುಪ ಬೇಕಾದರೆ ಬಂಟ್ವಾಳದಲ್ಲಿ ಉಗ್ರರು ಇರುವುದು ಸ್ವಷ್ಟ ಆಗುತ್ತಿದೆ, ಆದ್ದರಿಂದ ಸುಹಾಸ್ ಶೆಟ್ಟಿ ಪ್ರಕರಣವನ್ನು NIA ಗೆ ವಹಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

- Advertisement -

Related news

error: Content is protected !!