Monday, April 29, 2024
spot_imgspot_img
spot_imgspot_img

ಅವಾಚ್ಯ ಶಬ್ಧಗಳಿಂದ ಬೈದು ವ್ಯಕ್ತಿಗೆ ಜೀವ ಬೆದರಿಕೆ..!

- Advertisement -G L Acharya panikkar
- Advertisement -

ವ್ಯಕ್ತಿಯೋರ್ವರಿಗೆ ಅವಾಚ್ಯವಾಗಿ ಬೈಯ್ದು , ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಬಾಬನಕಟ್ಟೆ ಅನಂತಾಡಿ ಗ್ರಾಮ ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ಸೋಮಶೇಖರ ಹಾಗೂ ರಾಧಾಕೃಷ್ಣ ಎಂದು ಗುಎರುತಿಸಲಾಗದೆ.

ಬಾಬನಕಟ್ಟೆ ಅನಂತಾಡಿ ಗ್ರಾಮ ಬಂಟ್ವಾಳ ನಿವಾಸಿ ತಿರುಮಲೇಶ್ವರ ಎಂಬವರು ತಮ್ಮ ಅನಂತಾಡಿ ಗ್ರಾಮದ ಕೊಂಗಲಾಯಿ ಎಂಬಲ್ಲಿರುವ ಹೊಸ ಮನೆ ನಿರ್ಮಾಣಕ್ಕೆ ಮಾಡಿರುವ ಅಡಿಪಾಯವನ್ನು, ಸೋಮಶೇಖರ ಹಾಗೂ ರಾಧಾಕೃಷ್ಣ ಎಂಬವರು ನೆಲಸಮ ಮಾಡಿ ರಸ್ತೆಯನ್ನು ಮಾಡಿದ ಬಗ್ಗೆ ವಿಚಾರಿಸಿದಕ್ಕೆ ಆರೋಪಿಗಳು ಗಲಾಟೆ ಮಾಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸು ಠಾಣೆಗೆ ಬಂದು ದೂರು ನೀಡಿ ಮಧ್ಯಾಹ್ನ ವೇಳೆಗೆ ತನ್ನ ಮನೆಗೆ ಹಿಂತಿರುಗಿದಾಗ ಆಪಾದಿತರುಗಳ ವಿರುದ್ದ ಪೊಲೀಸು ದೂರು ನೀಡಿರುವ ವಿಚಾರವನ್ನು ತಿಳಿದುಕೊಂಡು ತಿರುಮಲೇಶ್ವರ ಅವರಿಗೆ ಅವಾಚ್ಯವಾಗಿ ಬೈಯ್ದು , ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 15/2024 ಕಲಂ: 504,323,324,506 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!