Sunday, June 29, 2025
spot_imgspot_img
spot_imgspot_img

ಬಾವಿಗೆ ಲಾರಿ ಡಿಕ್ಕಿ-ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಪುತ್ತೂರು: ಮಾಣಿ- ಮೈಸೂರು ರಾ.ಹೆದ್ದಾರಿಯ ಶೇಕಮಲೆ ಅಟಲ್ ನಗರ ಎಂಬಲ್ಲಿ ಸೇತುವೆ ಬಳಿ ಇದ್ದ ಬಾವಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ನಡೆದಿದೆ.


ಬೆಂಗಳೂರಿಂದ ಮಂಗಳೂರು ಕಡೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲೇ ಇದ್ದ ಬಾವಿಯ ಕಟ್ಟೆಗೆ ಡಿಕ್ಕಿ ಹೊಡೆದಿದೆ. ಬಾವಿಯ ಕಟ್ಟೆ ಸಂಪೂರ್ಣವಾಗಿ ಒಡೆದಿದೆ. ಕಾಂಕ್ರೀಟ್ ಸ್ಲಾಬ್ ಗಳು ಒಡೆದು ಚೂರಾಗಿದೆ. ಬಾವಿಯ ಕಟ್ಡೆ ಪೂರ್ತಿ ಒಡೆದು ಇನ್ನೇನು ಲಾರಿ ಬಾವಿಯೊಳಗೆ ಬೀಳುವುದಿತ್ತು. ಆ ವೇಳೆ ಪವಾಡ ಎಂಬಂತೆ ಲಾರಿ ಯ ಪ್ಲೇಟ್ ತುಂಡಾಗಿ ಬಾವಿಯ ಕಟ್ಡೆಯ ಕಲ್ಲೊಂದರಲ್ಲಿ ಜಾಮ್ ಆಗಿದೆ. ಬಳಿಕ ಚಾಲಕ ಮತ್ತು ನಿರ್ವಾಹಕ ಲಾರಿಯಿಂದ ಇಳಿದಿದ್ದಾರೆ.

- Advertisement -

Related news

error: Content is protected !!